-
Pu Shri Sanskriti Sampada
₹850.00Author: Prabhakar Joshi and Pu Guruprasad Bhat
ಕನ್ನಡನಾಡಿನ ವಿಶಿಷ್ಟ, ಬಹುಶ್ರುತ ವಿದ್ವಾಂಸ ಪು. ಶ್ರೀನಿವಾಸ ಭಟ್ಟ [೧೯೩೯-೨೦೧೧] ಅವರ ಸಂಸ್ಕೃತಿಯ ಕುರಿತ ಲೇಖನಗಳ ಸಂಕಲನವಿದು. ನಿಶ್ಚಿತ ನಿರ್ವಚನಕ್ಕೆ ಸಿಗದ ಅಸಾಮಾನ್ಯ ವಿಸ್ತಾರ, ವೈವಿಧ್ಯ ಮತ್ತು ಅರಿವಿನ ಆಗರವಾಗಿದ್ದ ಪು. ಶ್ರೀ. ಅವರು ಎಲ್ಲ ಅರ್ಥಗಳಲ್ಲಿ ‘ದೇಸಿ’ ಪರಂಪರೆಯ ಘನ ಪಂಡಿತರು. ಇತಿಹಾಸ, ತುಳುಸಂಸ್ಕೃತಿ. ಯಕ್ಷಗಾನ, ಹಳಗನ್ನಡ, ಜಾನಪದ ವಸ್ತು-ಸಂಗತಿ, ನಂಬಿಕೆ-ನಡವಳಿಕೆ, ವ್ಯಕ್ತಿ-ವಿಷಯ- ಇಂಥ ವಿಷಯಗಳಲ್ಲಿ ತಲಸ್ಪರ್ಶಿ ಅನುಭವವಿದ್ದ ಅವರ ವಿಶ್ಲೇಷಣೆ, ನಿರೂಪಣ ಶೈಲಿ ಅನ್ಯತ್ರ ದುರ್ಲಭ ಎಂಬಷ್ಟು ಅನನ್ಯ.
ಅವರ ಬರಹಗಳ ಶಿರೋನಾಮೆಗಳ ಅವುಗಳ ವೈಶಿಷ್ಟ್ಯವನ್ನು ಹೇಳುತ್ತವೆ- ತೊಟ್ಟಿಲುಗಳು, ಮುಳ್ಳುಗಳು, ಕೋಣೆಗಳು, ಬಾವಿಗಳು, ಗುಡ್ಡಗಳು, ಕೊಡೆಗಳು, ತಿಂಡಿಗಳು, ಪ್ರಸಾದ ವೈವಿಧ್ಯ, ಹೂಮಾಲೆ, ತೋಡು-ಗುಂರ್ಪೆ-ಮದಕ, ದಾರಿಗಳು, ಯಕ್ಷಗಾನ ಪ್ರಸಂಗಗಳು, ಪ್ರಸಂಗ ಸಾಹಿತ್ಯ ಸಮೀಕ್ಷೆ, ಸತ್ಯಪರೀಕ್ಷೆಯ ವಿಧಾನಗಳು, ನಿಷೇಧ ಮತ್ತು ಪರಿಹಾರ, ಬೇಸಾಯದ ನುಡಿತಗಳು, ಕ್ಷೇತ್ರ ವೃತ್ತಾಂತಗಳು, ಜಾತ್ರೆಗಳು, ಆಳುಪ ವಂಶ, ದಕ್ಷಿಣಕನ್ನಡದಲ್ಲಿ ವೀರ ಶೈವ ಧರ್ಮ, ಶಿಲಾಶಾಸನ ವಿವರ- ಇತ್ಯಾದಿ.ಪಾರಂಪರಿಕ ನೋಟ ಮತ್ತು ಆಧುನಿಕ ಸಂಶೋಧಕನ ದೃಷ್ಟಿಗಳ ಸಮನ್ವಯ, ತುಂಬ ಸರಳ-ಸುಲಭ ರೀತಿಯ ನಿರೂಪಣೆ, ತಪಸ್ಸಿನಂಥ ದೀರ್ಘಕಾಲದ ಅಧ್ಯಯನ, ಸೂಕ್ಷ್ಮ ಪರಿಶೀಲನ, ನೈಜ ಸಂಸ್ಕೃತಿ ಪ್ರೇಮದ ಒಳನೋಟಗಳು- ಇವೆಲ್ಲವನ್ನು ಗಮನಿಸಿದರೆ ಇವು ಕನ್ನಡ ಸಾರಸತ್ವ ಲೋಕಕ್ಕೆ ವಿಶೇಷವಾದ ಕೊಡುಗೆಯೆ ಸರಿ.ಪದಪದವಿಗಳ ಯೋಚನೆ ಇಲ್ಲದೆ, ಸ್ವಂತ ಆಸಕ್ತಿಯಿಂದ ಗ್ರಂಥ ಸಂಗ್ರಹ ಮಾಡಿ, ಕೇತ್ರಕಾರ್ಯದಲ್ಲಿಯೂ ತೊಡಗಿಕೊಂಡು ಸುಮಾರು ಆರು ದಶಕಗಳ ಕಾಲ ‘ಬರಿಗಾಲ ಸಂಶೋಧಕ’ನಾಗಿ [ಬ್ಯಾರ್ಫೂಟ್ ರಿಸರ್ಚರ್] ಕ್ರಿಯಾಶೀಲರಾಗಿದ್ದವರು. ಅಧ್ಯಾಪಕ ವೃತ್ತಿಯಿಂದ ಬಂದ ವೇತನದ ದೊಡ್ಡ ಭಾಗವನ್ನು ಅಧ್ಯಯನ ಸಂಪನ್ಮೂಲಗಳ ಸಂಗ್ರಹಕ್ಕೆ ವ್ಯಯಿಸಿದವರು. ಒಬ್ಬ ಶಾಲಾಮಾಸ್ತರನಾಗಿ ಸಂಶೋಧನೆಯ ದೃಷ್ಟಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಟ್ಟದÀ ಸಾಧನೆ ಮಾಡಿದವರು. ಅನೇಕ ಸಂಶೋಧಕರಿಗೆ ಜಿಜ್ಞಾಸುಗಳಿಗೆ ಮಾರ್ಗದರ್ಶನ ಗ್ರಂಥ ಸಹಾಯ ಮಾಡಿದರು ಅವರ ಅಪ್ರಕಟಿತ ಬರಹಗಳ ಸಂಪುಟವು ಅಧ್ಯಯನ ಆಸಕ್ತರಿಗೆ ಒಂದು ಅಮುಲ್ಯ ಆಕಾರ ಗ್ರಂಥವೆನಿಸಲಿದೆ. -
The Prince
₹199.00Author: K N Venkatasubba Rao
ಮೆಖೈವಲ್ಲಿ ನವೋದಯ ರಾಜತಾಂತ್ರಿಕ, ತತ್ವಜ್ಞಾನಿ, ಬರಹಗಾರ. ಇಟಲಿಯ ಫ್ಲಾರೆನ್ಸ್ ನಗರದ ಬಡಕುಟುಂಬದಲ್ಲಿ 1469ರಲ್ಲಿ ಜನಿಸಿದ ಮೆಖೈವಲ್ಲಿ ತನ್ನ 21ನೆಯ ವಯಸ್ಸಿನಲ್ಲಿ ಫ್ಲಾರೆಂಟೈನ್ ಪ್ರಾಂತ್ಯದ ರಾಜಕೀಯ ರಂಗ ಪ್ರವೇಶಿಸಿದ. ಫ್ಲಾರೆನ್ಸಿನ ಆಡಳಿತಕ್ಕೆ ಅಗತ್ಯ ಬೇಹುಗಾರಿಕೆ ಮಾಹಿತಿ ಒದಗಿಸುವುದು ಮೆಖೈವಲ್ಲಿಯ ಹೊಣೆಯಾಗಿತ್ತು. ಅಧಿಕಾರದ ಗಳಿಕೆ, ಬಳಕೆ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಮನುಷ್ಯ ಪ್ರಪಂಚಕ್ಕೇ ಅನ್ವಯವಾಗಬಲ್ಲಂತಹ ಮಾರ್ಮಿಕವಾದ ಬೃಹತ್ ವಿನ್ಯಾಸ ಅವನೊಳಗೆ ರೂಪುಗೊಳ್ಳುತ್ತಿತ್ತು. ಈ ಸಂದರ್ಭದಲ್ಲೇ ಫ್ಲಾರೆನ್ಸ್ ಗಣರಾಜ್ಯ ಪತನಗೊಂಡಿತು. ರಾಜಕುಟುಂಬದ ವಿರುದ್ಧ ಪಿತೂರಿಯ ಆರೋಪಕ್ಕೆ ಗುರಿಯಾಗಿ ಮೆಖೈವಲ್ಲಿ ಅಧಿಕಾರಭ್ರಷ್ಟನಾಗಬೇಕಾಯಿತು. ತನ್ನ ಜೀವಿತದ ಮುಂದಿನ ದಿನಗಳನ್ನು ಬರವಣಿಗೆಗೆ ಮೀಸಲಿಟ್ಟಿದ್ದ ಮೆಖೈವಲ್ಲಿ ಐವತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1527ರಲ್ಲಿ ವಿಧಿವಶನಾದ. 1532ರಲ್ಲಿ ಅಚ್ಚು ಕಂಡ ಅವನ `ಪ್ರಿನ್ಸಿಪೆ’, ಇಂಗ್ಲಿಷಿನಲ್ಲಿ `ದ ಪ್ರಿನ್ಸ್ ‘ ಆಗಿ 1640ರಲ್ಲಿ ಅಧಿಕೃತವಾಗಿ ಪ್ರಕಟಗೊಂಡಿತ್ತು. ಯುರೋಪಿನ ವ್ಯಾಪ್ತಿಯೊಳಗೆಯೇ ಸಾಕಷ್ಟು ವದಂತಿಗಳಿಗೆ ಒಳಗಾಗಿದ್ದ `ಪ್ರಿನ್ಸಿಪೆ’, `ದ ಪ್ರಿನ್ಸ್ ‘ ಆಗಿ ಮೆಚ್ಚುಗೆ ಮತ್ತು ಟೀಕೆಗಳನ್ನು ಇಂದಿಗೂ ಎದುರಿಸುತ್ತಲೇ ಇದೆ. ಮೆಖೈವಲ್ಲಿ `ಆಧುನಿಕ ರಾಜತಂತ್ರದ ಜನಕ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅವನನ್ನು ಅರ್ಥಶಾಸ್ತ್ರದ ಕರ್ತೃ ಕೌಟಿಲ್ಯನೊಡನೆ ಹೋಲಿಸುವ ವಾಡಿಕೆ ಇದೆ. ಇದು ಎಷ್ಟು ಸಮಂಜಸ ಎಂಬುದರ ಬಗ್ಗೆಯೂ ಪ್ರಾಜ್ಞರ ನಡುವೆ ಜಿಜ್ಞಾಸೆಯಿದೆ.
Interested customers may write to us at mup@manipal.edu about purchasing the book.
Also available on



