Sangeetashastragranthachandrike Volume-2
₹650.00
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.
| Categories: | Indian Regional Languages, Kannada |
|---|
Related products
-
Dodda Samagara Nalmoga
₹350.00Author: Dinesh Uppoora
ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗರು ಬಹುಮುಖ ವ್ಯಕ್ತಿತ್ವವುಳ್ಳ ಒಬ್ಬ ಮಹಾನ್ ದಾರ್ಶನಿಕ. ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ಆಡಳಿತದ ಧೋರಣೆಗಳ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು, ಹರಿಕಥಾದಾಸರಾಗಿ ತನ್ನ ವಿಚಾರಧಾರೆಯನ್ನು ಸಮಾಜಕ್ಕೆ ಪ್ರಚುರಪಡಿಸಿದವರು, ತನ್ನ ಪ್ರತ್ಯುತ್ಪನ್ನಮತಿತ್ವದಿಂದ, ಅಗಾಧವಾದ ಪಾಂಡಿತ್ಯದಿಂದ ತಾಳಮದ್ದಳೆ ಅರ್ಥಧಾರಿಗಳಾಗಿ ಕಲಾರಸಿಕರ ಮನಗೆದ್ದವರು. ಉತ್ತಮ ವೇಷಧಾರಿಗಳಾಗಿ ಬೇಡಿಕೆಯ ಕಲಾವಿದರಾದವರು, ಸರಳ ಜೀವನದ ಆದರ್ಶ ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿ ಬದುಕಿದವರು. ಇವರು 1911 ರ ಡಿಸೆಂಬರ್ 11 ರಂದು ಜನಿಸಿ, 1999 ರ ಆಗಸ್ಟ್ 1 ರಂದು ನಿಧನರಾದರು.
ಅವರ ಜೀವನದ ಘಟನೆಗಳನ್ನು ಆಧರಿಸಿ ಬರೆದ “ದೊಡ್ಡ ಸಾಮಗರ ನಾಲ್ಮೊಗ”ವನ್ನು ದಿನೇಶ ಉಪ್ಪೂರರು ಹಲವಾರು ಗ್ರಂಥ, ಸ್ನೇಹಿತರು, ಅಂತರ್ಜಾಲ ಇತ್ಯಾದಿಗಳಿಂದ ಸಂಗ್ರಹಿಸಿ ಅನಾವರಣಗೊಳಿಸಿದ್ದಾರೆ.
Interested readers may write to us at mup@manipal.edu about purchasing the book.
-
Bhagavantana Kandammagalu
₹190.00Author: Susmita Bagchi, Translator: Madhavi S Bhandary
ಅನುಪೂರ್ವಾ ಒಲ್ಲದ ಮನಸ್ಸಿನಿಂದ ಅನಿವಾರ್ಯವಾಗಿ ಅಮೇರಿಕಾ ಬಿಟ್ಟು ಭಾರತಕ್ಕೆ ಬರಬೇಕಾಯಿತು. ಕಲಾಶಿಕ್ಷಕಿಯಾಗಿ ಅಲ್ಲವಳ ಜೀವನ ಸುವ್ಯವಸ್ಥಿತವಾಗಿ ಸಾಗುತ್ತಿತ್ತು. ಭಾರತಕ್ಕೆ ಹಿಂದಿರುಗಿದ ನಂತರ ಅವಳ ಬದುಕು ಆಮೂಲಾಗ್ರವಾಗಿ ಬದಲಾಯಿಸಬಹುದೆಂದು ಅವಳು ಕನಸು-ಮನಸಲ್ಲೂ ಎಣಿಸಿರಲಿಲ್ಲ. ಒಮ್ಮೆ ಅವಳ ಕಾಲೇಜಿನ ಗೆಳತಿಯೊಬ್ಬಳು ಸೆರೆಬ್ರಲ್ ಪಾಲ್ಸಿ (ಮೆದುಳಿನ ಲಕ್ವ)ಯಿಂದ ಬಳಲುತ್ತಿರುವ ಮಕ್ಕಳ ಶಾಲೆ ‘ಆಶಾಜ್ಯೋತಿ’ಯ ಪರಿಚಯ ಮಾಡಿಸಿದಳು. ಅಲ್ಲಿಯೇ ಸ್ವಲ್ಪಕಾಲ ಆರ್ಟ್ ಟೀಚರ್ ರೂಪದಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡುವ ಅವಕಾಶವೂ ದೊರೆಯಿತು. ಚಿತ್ರಗಳನ್ನು ಬಿಡಿಸುವುದು ಹೇಗೆ, ಅದಕ್ಕೆ ಹೇಗೆ ಬಣ್ಣ ತುಂಬಬೇಕು ಇತ್ಯಾದಿ ವಿಷಯಗಳನ್ನು ಅಲ್ಲಿಯ ಮಕ್ಕಳಿಗೆ ಹೇಳಿಕೊಡಲಾರಂಭಿಸಿದಳು. ಆದರೆ ಆ ಮಕ್ಕಳು ಅವಳಿಗರಿವಿಲ್ಲದಂತೆ ಗೆಳೆತನದ, ಪ್ರೇಮದ, ನಗುವಿನ, ಎಲ್ಲಕ್ಕಿಂತಲೂ ಮಿಗಿಲಾಗಿ ರೋಗದೊಂದಿಗೆ ಹೋರಾಡುವ ಪಾಠ ಅರ್ಥಾತ್ ಬದುಕಿನ ವಾಸ್ತವಿಕತೆಯ ಪಾಠ ಕಲಿಸಬಹುದೆಂದು ಅವಳಿಗೇನು ಗೊತ್ತಿತ್ತು! ಹೊರಜಗತ್ತು ಅವರನ್ನು ಶಾರೀರಿಕ ಅಥವಾ ಮಾನಸಿಕ ದೃಷ್ಟಿಯಿಂದ ದುರ್ಬಲರೆಂದು ತಿಳಿದುಕೊಳ್ಳಲಿ! ಆದರೆ ಅವರ ಅಂತರಂಗದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಪಾರ ಕ್ಷಮತೆ ಅಡಗಿದೆ ಎಂಬುದು ಅವಳ ಅರಿವಿನ ಕ್ಷಿತಿಜವನ್ನೇ ವಿಸ್ತರಿಸಿತು. ಅನುಪೂರ್ವಾ ಮತ್ತಾರೂ ಅಲ್ಲ, ಸ್ವಯಂ ಲೇಖಕಿಯೇ! ಈ ಮಕ್ಕಳ ಅಂತರಂಗದ ಪುಟಗಳನ್ನು ಅತ್ಯಂತ ಹತ್ತಿರದಿಂದ ನೋಡಿದ್ದಾರೆ; ತಿಳಿದಿದ್ದಾರೆ; ಮತ್ತದನ್ನು ಶಬ್ದಗಳ ಮೂಲಕ ಕಾದಂಬರಿಯ ರೂಪದಲ್ಲಿ ಜೋಡಿಸಿದ್ದಾರೆ. ಈ ಒಂದು ರೋಚಕವಾದ ಕಥೆ ಒಡಿಯಾದಲ್ಲಿ ‘ದೇಬಶಿಶು’ವಾಗಿದ್ದುದು, ಅಜಯ್ ಪಟ್ನಾಯಕ್ರು ಅದನ್ನು ‘ದೇವಶಿಶು’ ವಾಗಿ ಹಿಂದಿಗೆ ಅನುವಾದಿಸಿದರು. ಆ ಹಿಂದಿ ಅನುವಾದವು ಜ್ಞಾನಪೀಠ ಪ್ರಕಾಶನದಿಂದ ಪ್ರಕಟಗೊಂಡಿದೆ. ಈ ಕೃತಿಯು ಬಿಕ್ರಮ್ ಕೆ. ದಾಸ್ರಿಂದ ‘Children of Better God’ ಎಂಬ ಹೆಸರಿನಲ್ಲಿ ಆಂಗ್ಲ ಭಾಷೆಗೂ ಅನುವಾದಗೊಂಡಿದೆ. ಇದೀಗ ‘ಭಗವಂತನ ಕಂದಮ್ಮಗಳು’ ರೂಪದಲ್ಲಿ ಕನ್ನಡದ ಓದುಗರ ಮುಂದಿದೆ.
Interested customers may write to us at mup@manipal.edu about purchasing the book.
Also available on

-
Chandrayana
₹280.00Author: Parvathi Pitagi
`ಚಂದ್ರಯಾನ’ ಒಂದು ಅಪೂರ್ವ ಮಾದರಿಯ ಕಾದಂಬರಿ. ಇದರಲ್ಲಿ ಫ್ಯಾಂಟಸಿ ಇದೆ, ಸಾಮಾಜಿಕತೆ ಇದೆ, ಸ್ತ್ರೀಪರ ಚಿಂತನೆ ಇದೆ, ರಾಜಕೀಯ ಇದೆ, ಎಲ್ಲವೂ ಇವೆೆ. ಇದರ ನಿರೂಪಣೆಯಲ್ಲಿಯೂ ಸರಳತೆ ಇದೆ, ಲಾಲಿತ್ಯ ಇದೆ. ಉತ್ತರಕರ್ನಾಟಕದ ಭಾಷಿಕ ಸೊಗಡು ಈ ಕಾದಂಬರಿಯನ್ನು ಅನನ್ಯವಾಗಿಸಿದೆ. ಇದನ್ನು ಓದುವುದೆಂದರೆ ರೋಚಕ ಲೋಕದಲ್ಲಿ ವಿಹರಿಸಿದಂತೆ.
ಕಥಾನಾಯಕಿ ರೋಹಿಣಿ ಚಿಕ್ಕಂದಿನಿAದಲೂ ಆಗಸ, ಆಕಾಶಕಾಯಗಳ ಬಗ್ಗೆ ಸಾಕಷ್ಟು ಕೌತುಕ ಹೊಂದಿರುತ್ತಾಳೆ. ಅದೇ ರೀತಿ ತಾನು ಬೆಳೆದಂತೆಲ್ಲ ಆಸಕ್ತಿ ಯನ್ನು ಬೆಳೆಸಿಕೊಳ್ಳುತ್ತಾ ಮುಂದೊAದು ದಿನ ಗಗನ ಯಾತ್ರೆ ಕೈಗೊಳ್ಳುವ ಕನಸುಹೊತ್ತು ಆ ದಿಕ್ಕಿನಲ್ಲಿ ಪ್ರಯತ್ನಿಸುತ್ತಾ ತನ್ನ ಓದನ್ನು ಮುಂದುವರೆಸುತ್ತಾಳೆ. ಆಕೆಯ ಬಾಲ್ಯದ ಗೆಳೆಯ ಚಂದ್ರಶೇಖರ ಹುಟ್ಟುರಾಜಕಾರಣಿ. ಚಿಕ್ಕಂದಿನಿAದಲೇ ಆಕೆಯನ್ನು ಬಯಸುತ್ತಿದ್ದ. ಆತ ಬೆಳೆದ ನಂತರ ಆಕೆಯನ್ನು ಮದುವೆಯಾಗಲು ಇಷ್ಟಪಡುತ್ತಾನೆ. ಆಕೆ ಗಗನ ಯಾತ್ರೆಗೆ ಆಯ್ಕೆಯಾದಲ್ಲಿ ತನಗೆ ದಕ್ಕುವುದಿಲ್ಲವೆಂದು ಮಂತ್ರಿಯಾದ ಆತ ಅಡ್ಡಗಾಲು ಹಾಕುತ್ತಾನೆ.ಎಲ್ಲ ಅಡೆತಡೆಗಳನ್ನು ಮೀರಿ ರೋಹಿಣಿ ಕೊನೆಗೂ ಯಶಸ್ವಿಯಾಗಿ ಉಪಗ್ರಹದ ಮೇಲಿಂದ ಸುಂದರ ಭಾರತವನ್ನು ಕಂಡು `ಸಾರೆ ಜಹಾಂಸೆ ಅಚ್ಛಾ’ ಎಂದು ಉದ್ಗರಿಸುತ್ತಾಳೆ.ಅದು ಇಡೀ ಕಾದಂಬರಿಯ ಭರತವಾಕ್ಯವೂ ಹೌದು.
Interested overseas readers may write to us at mup@manipal.edu about purchasing the book.
-
Christa Shaka 1800 Ra Modalina Mysooru ithihaasa
₹295.00Author: D S Achuta Rao Translator: S Narendra Prasad
೧೮೦೦ ಕ್ರಿ. ಶ. ದ ಹಿಂದಿನ ಮೈಸೂರು ಇತಿಹಾಸವು ಪ್ರೊ. ಡಿ ಎಸ್ ಅಚ್ಯುತ ರಾವ್ ಅವರ ಜೀವನ ಮತ್ತು ಕೆಲಸದ ಬಗ್ಗೆ. ಮೈಸೂರು ಇತಿಹಾಸದ ಕುರಿತಾದ ಅವರ ಸಂಶೋಧನೆಯು 1940-65ರ ಅವಧಿಯಲ್ಲಿ ಅವರು ಪ್ರಕಟಿಸಿದ ಹತ್ತು ಸೂಚ್ಯಂಕ ಲೇಖನಗಳಿಂದ ಪ್ರತಿನಿಧಿಸುತ್ತದೆ. ಅವರು ಭಾರತದ ಇತಿಹಾಸ ಮತ್ತು ಅದರ ಅದ್ಭುತ ಭೂತಕಾಲವನ್ನು ಸಕ್ರಿಯವಾಗಿ ಜನಪ್ರಿಯಗೊಳಿಸಿದರು. ಮಹಾರಾಜಾಸ್ ಕಾಲೇಜ್ ಹಿಸ್ಟರಿ ಸೊಸೈಟಿ, ಭಾರತದ ವಸಾಹತು ಸಂಶೋಧಕರು ಮತ್ತು ಕನ್ನಡ ವಿಶ್ವಕೋಶದಲ್ಲಿ ಮೈಸೂರು ಸರ್ಕಾರದ ಉಪಕ್ರಮದಿಂದ ಭಾರತೀಯ ಇತಿಹಾಸದಲ್ಲಿ ಉಪಕ್ರಮಗಳನ್ನು ಪ್ರಸ್ತುತಪಡಿಸುವುದರಿಂದ ಅಂತಹ ಮೂರು ಲೇಖನಗಳನ್ನು ಸೇರಿಸಲಾಗಿದೆ. ಎರಡನೇ ಭಾಗದಲ್ಲಿ ಅವರ ಜೀವನಚರಿತ್ರೆಯಲ್ಲಿ, ಅವರ ವಿದ್ಯಾರ್ಥಿಗಳು ಮತ್ತು ಮಕ್ಕಳು ಶಿಕ್ಷಕ ಮತ್ತು ತಂದೆಯಾಗಿ ಅವರ ಜೀವನದ ಬಗ್ಗೆ ಬರೆದಿದ್ದಾರೆ, ಅವರ ಅವಧಿಯ ಸಂದರ್ಭವನ್ನು ಒದಗಿಸಿದ್ದಾರೆ. ಪುಸ್ತಕವು ಕಳೆದ ಶತಮಾನದ ಮಧ್ಯದಲ್ಲಿ ಇತಿಹಾಸ ಸಂಶೋಧನೆಗೆ ಆಸಕ್ತಿದಾಯಕ ವಿಂಡೋವನ್ನು ಪ್ರಸ್ತುತಪಡಿಸುತ್ತದೆ.
Interested readers may write to us at mup@manipal.edu about purchasing the book.
-
Puttakkana Highway
₹350.00ಪುಸ್ತಕವು ಮೂಲ ಕಥೆಯಿಂದ ಪ್ರಶಸ್ತಿ ವಿಜೇತ ದೃಶ್ಯ ಚಿಕಿತ್ಸೆಯಾಗಿ ಪರಿವರ್ತನೆಗೊಂಡ ಪ್ರಯಾಣದ ಬಗ್ಗೆ ಹೇಳುತ್ತದೆ ಮತ್ತು ನಂತರ ಸ್ಕ್ರಿಪ್ಟ್, ವಿಮರ್ಶೆಗಳು ಮತ್ತು ಚರ್ಚೆಗಳೊಂದಿಗೆ ಪದ ರೂಪಕ್ಕೆ ತಿರುಗುತ್ತದೆ. ಸಂಶೋಧಕರಿಗೆ, ಇದು ಪದಗಳಿಂದ ಸ್ಕ್ರಿಪ್ಟ್ಗೆ ದೃಶ್ಯಗಳಿಗೆ ಮತ್ತು ಪದಗಳಿಗೆ ಹಿಂತಿರುಗುವ ಪ್ರಯಾಣದ ಕಲಿಕೆಯ ಅನುಭವವನ್ನು ನೀಡುತ್ತದೆ. ಚಲನಚಿತ್ರ ರಸಿಕರಿಗೆ ಇದು ಕಥೆಯು ಚಲನಚಿತ್ರವಾಗಿ ಹೇಗೆ ಹೊರಹೊಮ್ಮುತ್ತದೆ ಎಂಬುದರ ರಿಂಗ್ಸೈಡ್ ನೋಟವನ್ನು ನೀಡುತ್ತದೆ. ಅರ್ಥಶಾಸ್ತ್ರಜ್ಞರು ಮತ್ತು ಮಾನವ ಕಾರ್ಯಕರ್ತರಿಗೆ, ಇದು ಅಭಿವೃದ್ಧಿಯ ಸಮಸ್ಯೆಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ. ಈ ಪುಸ್ತಕದಲ್ಲಿ “ಪುಟ್ಟಕ್ಕನ ಹೈವೇ” ಚಲನಚಿತ್ರದ ಚಿತ್ರಕಥೆ ಮಾತ್ರವೇ ಅಲ್ಲದೆ , ಚಿತ್ರದ ಕುರಿತಂತೆ ಬಂದ ವಿಮರ್ಶೆಗಳು, ಚಿತ್ರವನ್ನು ಕುರಿತಂತೆ ನಡೆದ ಸಂವಾದದ ವಿವರಗಳು, ಚಿತ್ರದ ಡಿವಿಡಿ ಮತ್ತು ನಾಗತಿಹಳ್ಳಿ ಚಂದ್ರಶೇಖರ್ ಅವರ ಮೂಲಕಥೆ “ಪುಟ್ಟಕ್ಕನ ಮೆಡಿಕಲ್ ಕಾಲೇಜ್” ಸಹ ಇದೆ.
Interested readers may write to us at mup@manipal.edu about purchasing the book.
-
Daddal Kaadina Mouna
₹240.00Author: Shashiraj Kavoor
ದಡ್ಡಾಲ್ ಕಾಡಿನ ಮೌನ’ ಕಿರು ಕಾದಂಬರಿಯಲ್ಲಿ ಶಶಿರಾಜ್ ಅವರು ಕೊರಗ ಸಮುದಾಯದ ಬಗ್ಗೆ ಸಾಕಷ್ಟು ಕ್ಷೇತ್ರಕಾರ್ಯದ ಅಧ್ಯಯನ ನಡೆಸಿ, ಆಧುನಿಕತೆಯ ಸಂಕ್ರಮಣಕಾಲದಲ್ಲಿನ ಕೊರಗರ ಬದುಕಿನ ಸಂಗತಿಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ನೋಡಲು ಪ್ರಯತ್ನಿಸಿದ್ದಾರೆ. ಅದರ ಜೊತೆಗೆಯೇ ತುಳುವ ಸಂಸ್ಕೃತಿಯ ಗುತ್ತುವಿನಂತಹ ಪರಂಪರೆಯ ಆಡಳಿತದ ಚೌಕಟ್ಟಿನಲ್ಲಿ ನಡೆಯುತ್ತಿದ್ದ ದೈವಾರಾಧನೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕೂಡಾ ಪೋಣಿಸಿದ್ದಾರೆ. ಕೆಲವು ದಶಕಗಳ ಹಿಂದೆ ತುಳುನಾಡಿನಲ್ಲಿ ನಡೆಯುತ್ತಿದ್ದಂತಹ ವಿದ್ಯಮಾನಗಳನ್ನು ಕುರಿತ ಕೆಲವು ಸೂಕ್ಷ್ಮ ನೋಟಗಳು ಇಲ್ಲಿನ ಕಥಾ ಸಂವಿಧಾನದಲ್ಲಿ ಸೇರಿಕೊಂಡಿವೆ. ಇನ್ನೊಂದು ಕಡೆ ಆಧುನಿಕ ವೈದ್ಯಕೀಯ ಪದ್ಧತಿಯು ಬಂದ ಬಳಿಕವೂ ದೇಸಿ ಪರಂಪರೆಯ ವೈದ್ಯಪದ್ಧತಿ ಮತ್ತು ನಂಬಿಕೆಗಳು ಕ್ರಿಯಾಶೀಲವಾಗಿ ಇರುವುದರ ವಾಸ್ತವದ ಚಿತ್ರಣವೂ ಅನಾವರಣವಾಗಿದೆ. ಒಂದು ವ್ಯವಸ್ಥೆಯ ಒಳಗಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಏಕಕಾಲಕ್ಕೆ ಕ್ರಿಯಾಶೀಲವಾಗಿ ಇರುವ ವೈರುಧ್ಯದ ಸಂಗತಿಗಳೂ ಇಲ್ಲಿ ಕಾಣಿಸುತ್ತವೆ. ಕೊರಗಸಮುದಾಯದ ಸಂಕೀರ್ಣ ಭಾವನೆಗಳ ತೊಳಲಾಟವನ್ನು ಇಲ್ಲಿ ಗ್ರಹಿಸಬಹುದು. ಕುಲಸಂಬಂಧಿ ಆಚರಣೆಗಳನ್ನು ಮಾಡುತ್ತಲೂ ಅವುಗಳಲ್ಲಿನ ಅಮಾನವೀಯ ಅಂಶಗಳನ್ನು ತೊಡೆದುಹಾಕುವ ಮನೋಧರ್ಮವು ಕಾದಂಬರಿಯ ಬೆಳವಣಿಗೆಯಲ್ಲಿ ಕಾಣಿಸುತ್ತದೆ.
Interested readers may write to us at mup@manipal.edu about purchasing the book.
-
Inti Dvadasha Akhyana
₹120.00Author: Sathyavathi Harikrishnan
ಸತ್ಯವತಿ ಹರಿಕೃಷ್ಣನ್ ಹಾಸ್ಯಬರವಣಿಗೆಯಲ್ಲಿ ಸುಮಾರು ಎರಡು ದಶಕಗಳಿಂದ ತನ್ನನ್ನು ತೊಡಗಿಸಿಕೊಂಡಿರುವ ಕವಯಿತ್ರಿ. ಇವರ ಹಾಸ್ಯಲೇಖನಗಳು ತರಂಗ, ತುಷಾರ, ಮಯೂರ, ಕರ್ಮವೀರದಂಥ ನಿಯತಕಾಲಿಕಗಳಲ್ಲಿ, ಉದಯವಾಣಿ, ಪ್ರಜಾವಾಣಿ ಮುಂತಾದವುಗಳಲ್ಲಿಯೂ ಪ್ರಕಟಗೊಂಡಿವೆ. 2002ರಲ್ಲಿ ಡೆಟ್ರಾಯಿಟ್ ನಲ್ಲಿ ನಡೆದ “ಅಕ್ಕ” ವಿಶ್ವ ಕನ್ನಡ ಸಮ್ಮೇಳನದ ಸ್ಮರಣ ಸಂಚಿಕೆಯಲ್ಲಿ ಇವರ “ಗುಂಡ್ರಾಮನ ಚಿಕಿತ್ಸಾಯಣ’ ಎಂಬ ಕೃತಿ ಪ್ರಕಟವಾಗಿದೆ. ಸನ್ಮಾನ್ಯರಾದ ದೇಜಗೌ ಮತ್ತು ಜಿಟಿನಾರವರ ಸಂಪಾದಕತ್ವದಲ್ಲಿ ಪ್ರಕಟವಾದ “ಪುಸ್ತಕ ಪ್ರಪಂಚ’ದಲ್ಲಿ ಇವರ ಅನುವಾದಿತ ಲೇಖನಗಳು ಪಡಿಮೂಡಿವೆ. “ಕುಂಬಾಸ’, “ನುಗ್ಗೇಹಳ್ಳಿ ಪಂಕಜ’ವೇ ಮೊದಲಾದ ಪ್ರಶಸ್ತಿಗಳನ್ನು ಪಡೆದಿರುವ ಸತ್ಯವತಿಯವರು ಈಗಾಗಲೇ ಐದು ಹಾಸ್ಯ ಸಂಕಲನಗಳನ್ನು ರಚಿಸಿದ್ದಾರೆ. ಅವರ ಆರನೆಯ ಹಾಸ್ಯ ಸಂಕಲನವೇ – “ಇಂತಿ ದ್ವಾದಶ ಆಖ್ಯಾನ’. ಹಾಸ್ಯದಲ್ಲಿ ಅಪಹಾಸ್ಯ, ತಿಳಿಹಾಸ್ಯ, ವ್ಯಂಗ್ಯ ಮುಂತಾದ ಪ್ರಭೇದಗಳಿವೆ. ವ್ಯಂಗ್ಯಮಿಶ್ರಿತವಾದ ತಿಳಿಹಾಸ್ಯ ಒಂದೇ ಕಾಲದಲ್ಲಿ ಎರಡು ಉದ್ದೇಶಗಳನ್ನು ಹೊಂದಿರುತ್ತವೆ. ಅದು ಮೇಲ್ನೋಟಕ್ಕೆ ಮನೋರಂಜನೆಯಾಗಿ ಕಂಡರೂ, ಅದರ ಇಂಗಿತ ಓದುಗರನ್ನು ಗಂಭೀರ ಚಿಂತನೆಗೆ ತೊಡಗುವಂತೆ ಮಾಡುವುದಾಗಿರುತ್ತದೆ. ವ್ಯಕ್ತಿಯನ್ನು ನೋಯಿಸದೇ ಲಘುಹಾಸ್ಯ-ವ್ಯಂಗ್ಯಗಳಿಂದ ಸ್ವವಿಮರ್ಶೆ ಮಾಡಿಕೊಳ್ಳುವಂತೆ ಪ್ರೇರೇಪಿಸುವುದು ಹಾಸ್ಯದ ಕಲಾತ್ಮಕ ಪ್ರಕ್ರಿಯೆ. ಶ್ರೀಮತಿ ಸತ್ಯವತಿಯವರ ಈ ಕೃತಿಯಲ್ಲಿ ಇಂತಹ ಒಂದು ಪ್ರಯತ್ನವನ್ನು ನಾವು ಕಾಣಬಹುದು. “ಇಂತಿ ದ್ವಾದಶ ಆಖ್ಯಾನ’ದಲ್ಲಿ ಹನ್ನೆರಡು ವೈವಿಧ್ಯಮಯ ಸಣ್ಣ ಹಾಸ್ಯಲೇಖನಗಳಿವೆ. ಸತ್ಯವತಿಯವರು ನಮ್ಮ ಜೀವನದ ಸಾಮಾನ್ಯ ಘಟನೆಗಳನ್ನೇ ರಂಗುರಂಗಾಗಿ ತಿಳಿಹಾಸ್ಯದ ಮೂಲಕ ಈ ಕೃತಿಯಲ್ಲಿ ತೋರಿಸಿದ್ದಾರೆ. ಕಾಲ್ಪನಿಕ ಘಟನೆಗಳಲ್ಲಿ ಹಾಸ್ಯದ ಪಾತ್ರಗಳನ್ನು ಸೃಷ್ಟಿಸಿ, ಗಂಭೀರ ವಿಚಾರಗಳನ್ನು ಮನಮುಟ್ಟುವಂತೆ ನಿರೂಪಿಸುವ ಲೇಖಕಿಯ ಶೈಲಿಯು ಅಪೂರ್ವವಾದದ್ದು. ಪ್ರತಿ ಕತೆಯ ಶೀರ್ಷಿಕೆಯಲ್ಲೇ ಹಾಸ್ಯ ತುಂಬಿರುವ ಈ ಕೃತಿಯು ಓದುಗರನ್ನು ನಗಿಸುವಲ್ಲಿ ಯಶಸ್ವಿಯಾಗುತ್ತದೆ.
Interested customers may write to us at mup@manipal.edu about purchasing the book.
Also available on

-
Phedra
₹180.00Translator: Madhava Chippalli
ರಾಸೀನ್ನ ಫೀದ್ರಾ ನಾಟಕವು ಪಾಶ್ಚಿಮಾತ್ಯ ನಾಟಕ ಸಾಹಿತ್ಯದಲ್ಲೇ ಒಂದು ಆಯಕಟ್ಟಿನ ಕೃತಿ. ಗ್ರೀಕ್ ಮತ್ತು ಎಲಿಜಬೆಥನ್ ನಾಟಕಗಳಲ್ಲಿ ಕಾಣಸಿಗದ ಹೊಸ ಬಗೆಯ ಮನೋಲೋಕವೊಂದನ್ನು ತನ್ನ ಪಾತ್ರಗಳಿಗೆ ಧಾರಣೆ ಮಾಡಿಸಿದ ಈ ನಾಟಕವು ಆ ಮೂಲಕವೇ ಈ ಪರಂಪರೆಯಲ್ಲಿ ಮನೋವಿಜ್ಞಾನಕ್ಕೆ ಒಂದು ಖಾಯಂ ಸ್ಥಾನವನ್ನು ಒದಗಿಸಿಕೊಟ್ಟಿತು. ಮುಂದೆ ಬಹುತೇಕ ಪಾಶ್ಚಿಮಾತ್ಯ ನಾಟಕಗಳು ಈ ಪರಂಪರೆಯನ್ನು ಮುಂದುವರಿಸಿದವು; ರಂಗಭೂಮಿಯಲ್ಲೂ ಮನೋಲೋಕವನ್ನು ಮುಂದಕ್ಕೆ ತರುವ ವಿಭಿನ್ನ ಪ್ರಯೋಗಗಳಿಗೆ ಈ ಪರಂಪರೆಯು ಚಾಲ್ತಿ ನೀಡಿತು. ಈ ಸಂಪ್ರದಾಯಕ್ಕೆ ವಿರೋಧಿಯಾದ ಫ್ರಾನ್ಸಿನ ಪ್ರಸಿದ್ಧ ರಂಗಕರ್ಮಿ ಆಂತೋನಿನ್ ಆರ್ತೋನ ಮಾತುಗಳನ್ನು ಕೇಳುವುದಾದರೆ, ಪಾಶ್ಚಿಮಾತ್ಯ ರಂಗಭೂಮಿಯಲ್ಲಿ ‘ಸೈಕಾಲಜಿಯ ದುರ್ಬೀಜ’ ಬಿತ್ತಿದ ಕೃತಿ ಇದು! ಹಾಗಿರುವುದರಿಂದ, ನಾವು ಈ ನಾಟಕವನ್ನು ಹೇಗೇ ಓದಲಿ, ಓದದೆ ಇದ್ದರೆ ಅಷ್ಟರ ಮಟ್ಟಿಗೆ ಪಾಶ್ಚಾತ್ಯ ನಾಟಕ ಸಂಪ್ರದಾಯದ ಅರಿವು ಅಪೂರ್ಣ. ಅಂಥ ಪ್ರಮುಖ ನಾಟಕವೊಂದು ಇನ್ನೂ ಕನ್ನಡಕ್ಕೆ ಬಾರದೆ ಉಳಿದಿತ್ತು; ಆ ಲೋಪವನ್ನು ಈ ಅನುವಾದವು ಸಮರ್ಥವಾಗಿಯೇ ತುಂಬಿಸಿದೆ. ಮೂಲದ ನಿಷ್ಠೆಯೊಂದಿಗೆ ಭಾಷಾಗಾಂಭೀರ್ಯ ಮತ್ತು ಮಾತಿನ ಸುಭಗತೆ ಎರಡನ್ನೂ ಒಟ್ಟಿಗೇ ಹಿಡಿಯಲು ಯತ್ನಿಸಿರುವ ಈ ಅನುವಾದವನ್ನು ನಾನು ತುಂಬು ಮನಸ್ಸಿನಿಂದ ಸ್ವಾಗತಿಸುತ್ತೇನೆ.
Interested readers may write to us at mup@manipal.edu about purchasing the book.















