Dodda Samagara Nalmoga
₹350.00
Author: Dinesh Uppoora
ದೊಡ್ಡ ಸಾಮಗರೆಂದೇ ಪ್ರಸಿದ್ಧರಾದ ಮಲ್ಪೆ ಶಂಕರನಾರಾಯಣ ಸಾಮಗರು ಬಹುಮುಖ ವ್ಯಕ್ತಿತ್ವವುಳ್ಳ ಒಬ್ಬ ಮಹಾನ್ ದಾರ್ಶನಿಕ. ಸ್ವಾತಂತ್ರ್ಯ ಹೋರಾಟಗಾರರಾಗಿ ಬ್ರಿಟಿಷರ ಆಡಳಿತದ ಧೋರಣೆಗಳ ವಿರುದ್ಧ ಹೋರಾಡಿ ಜೈಲುವಾಸ ಅನುಭವಿಸಿದವರು, ಹರಿಕಥಾದಾಸರಾಗಿ ತನ್ನ ವಿಚಾರಧಾರೆಯನ್ನು ಸಮಾಜಕ್ಕೆ ಪ್ರಚುರಪಡಿಸಿದವರು, ತನ್ನ ಪ್ರತ್ಯುತ್ಪನ್ನಮತಿತ್ವದಿಂದ, ಅಗಾಧವಾದ ಪಾಂಡಿತ್ಯದಿಂದ ತಾಳಮದ್ದಳೆ ಅರ್ಥಧಾರಿಗಳಾಗಿ ಕಲಾರಸಿಕರ ಮನಗೆದ್ದವರು. ಉತ್ತಮ ವೇಷಧಾರಿಗಳಾಗಿ ಬೇಡಿಕೆಯ ಕಲಾವಿದರಾದವರು, ಸರಳ ಜೀವನದ ಆದರ್ಶ ವ್ಯಕ್ತಿತ್ವದಿಂದ ಗಾಂಧಿವಾದಿಗಳಾಗಿ ಬದುಕಿದವರು. ಇವರು 1911 ರ ಡಿಸೆಂಬರ್ 11 ರಂದು ಜನಿಸಿ, 1999 ರ ಆಗಸ್ಟ್ 1 ರಂದು ನಿಧನರಾದರು.
ಅವರ ಜೀವನದ ಘಟನೆಗಳನ್ನು ಆಧರಿಸಿ ಬರೆದ “ದೊಡ್ಡ ಸಾಮಗರ ನಾಲ್ಮೊಗ”ವನ್ನು ದಿನೇಶ ಉಪ್ಪೂರರು ಹಲವಾರು ಗ್ರಂಥ, ಸ್ನೇಹಿತರು, ಅಂತರ್ಜಾಲ ಇತ್ಯಾದಿಗಳಿಂದ ಸಂಗ್ರಹಿಸಿ ಅನಾವರಣಗೊಳಿಸಿದ್ದಾರೆ.
Interested readers may write to us at mup@manipal.edu about purchasing the book.
| Format |
|---|
Related products
-
Lady Lokasundari Raman: Reflections of Her Early Life and Times
₹380.00Lady Lokasundari Raman was a charismatic person in her own right, as well as a devoted helpmate to her scientist-husband, Sir C V Raman. The book traces her early life in Madurai, Chennai and Calcutta, and we get a glimpse of the role of a young woman in the early decades of the twentieth century as she went forward bearing the many responsibilities of an extended family. This biography brings to light details of an unconventional wedding that had to be postponed due to societal pressures and an unconventional marriage between two great individuals.
Interested customers may write to us at mup@manipal.edu about purchasing the book.
Also available on

-
Uncharted: My Journey into the Himalayas
₹700.00Author: Ganesh Nayak
Ganesh Nayak found his calling in something totally out of the box. He developed an interest in cycling and quit his earlier job to cycle around India. His attempt to focus on health and fitness ultimately transformed into solo expeditions, as he wheeled his bicycle into Srinagar, and further went on to cover Ladakh, Himachal Pradesh, Uttarakhand, Nepal, Bihar, Uttar Pradesh, Madhya Pradesh, Maharashtra, Goa, Karnataka, the gruelling mountain circuits in the Himalayas, the Ring Road in Iceland, the Pamir Highway in Tajikistan and Kyrgyzstan. During the travels he was chased by monkeys, saw snow leopards and met similar spontaneous travellers. He currently serves as an Assistant Professor at the Department of Instrumentation and Control Engineering, Manipal Institute of Technology (MIT), Manipal. Apart from a Master?s degree in Digital Electronics he has also earned a diploma in Outdoor Education from National Outdoor Leadership School, USA. His research interest is in the field of Outdoor Education. When he is not preparing for his next bicycle tour, he is facilitating outdoor experiences to inculcate leadership and environmental stewardship amongst his students at MIT, Manipal.
Interested readers may write to us at mup@manipal.edu about purchasing the book.
-
Footprints on the Sands of Time
₹350.00Author: Umesh Bhat B
Step into the captivating world of Dr Mahadev as he embarks on a journey of self-discovery. Tracing his lost memory, family, and roots Dr Mahadev moves through the bustling streets of medieval North India in the 12th Century to the serene shores of present-day coastal Karnataka. As Dr Mahadev searches for answers to his past, he meets the struggles of people through the ages, from the turmoil of invading forces to the peaceful present. Along the way, he explores the fascinating world of genetics, from its beginnings with Mendel to the latest breakthroughs in medical science, including the search for the gene responsible for a rare genetic disease called “myelofibrosis.”
With elements of mystery, romance, and vivid descriptions of travel, this story captures the essence of human experience. Dr Mahadev’s journey is not just about finding himself, it is about understanding the connections between generations and appreciating the nuances of life. The story unfolds in the coastal regions of Karnataka, Kerala, and Tamil Nadu. It is filled with vivid depiction of the historical and traditional richness of these lands. Through Dr Mahadev, the readers will be transported on an unforgettable adventure filled with history, geography, and the resilience of human spirit.
Interested customers may write to us at mup@manipal.edu about purchasing the book.
-
Kempu Kanagile and Chitra
₹160.00Author: Rabindranath Tagore, Translator: Sudha Adukkala
ಕೆಂಪು ಕಣಗಿಲೆ: ಅದೆಂಥ ಗಾಢಾಂಧಕಾರವೇ ಇರಲಿ, ಪುಟ್ಟ ಹಣತೆಯೊಂದು ಅದನ್ನು ತೊಡೆಯಬಲ್ಲುದೆಂಬುದು ಸಾರ್ವಕಾಲಿಕ ಸತ್ಯ. ಅಂಥದೊAದು ಸಂಘರ್ಷದ ಕಥನವನ್ನು ಗುರುದೇವ ರವೀಂದ್ರರು ತಮ್ಮ ಈ ನಾಟಕದಲ್ಲಿ ಹೇಳಿದ್ದಾರೆ. ‘ಕೆಂಪು ಕಣಗಿಲೆ’ ತೆರೆದಿಡುವ ಕೌರ್ಯದ ಜಗತ್ತು ಇಂದು ಈ ಕಾಲಘಟ್ಟದಲ್ಲಿ ನಿಂತು ಬರೆದರೇನೋ ಎಂಬಷ್ಟು ತಾಜಾ ಆಗಿದೆ. ಇಲ್ಲಿಯ ರಂಜನ ಕೇವಲ ಒಂದು ಪಾತ್ರವಲ್ಲ; ನಾವೆಲ್ಲರೂ ನಮ್ಮೊಳಗೆ ತುಂಬಿಸಿಕೊಳ್ಳಬೇಕಾದ ಜೀವನ ಪ್ರೀತಿಯ ವಿವಿಧ ಆಯಾಮಗಳ ಪ್ರತಿನಿಧಿ. ಇಲ್ಲಿಯ ನಂದಿನಿ ಇಂದು ಜಗವ ಸಂತೈಸಬೇಕಾದ ತಾಯಿಹೃದಯದ ಪ್ರತೀಕವಾಗಿದ್ದಾಳೆ.
ಚಿತ್ರಾ: ಪೌರಾಣಿಕ ಕಥಾನಕವೊಂದರ ಪುನರ್ಲೇಖನದ ಈ ನಾಟಕವು ಹೆಣ್ಣು ಮತ್ತು ರಾಷ್ಟçವನ್ನು ಒಂದು ಸಂಕಥನವನ್ನಾಗಿ ಚರ್ಚಿಸುತ್ತದೆ. ಹೆಣ್ಣು-ಗಂಡಿನ ಘನತೆಯ ಬದುಕನ್ನು ಕನಸುವ ನಿರೂಪಣೆ ನಾವು ಕಟ್ಟಬೇಕಾಗಿರುವ ರಾಷ್ಟçದ ರೂಪುರೇಷೆಗಳನ್ನೂ ತನ್ನೊಳಗೆ ಆಡಕ ಮಾಡಿಕೊಂಡಿದೆ. ನಮ್ಮ ಅನನ್ಯತೆಯನ್ನು ಉಳಿಸಿಕೊಳ್ಳುತ್ತಲೇ ಇನ್ನೊಬ್ಬರೊಂದಿಗೆ ಸಹಬಾಳ್ವೆಯನ್ನು ನಡೆಸುವ ಬಗೆಯನ್ನು ಮಂಡಿಸುತ್ತದೆ. ತಾನು ಆರೋಪಿಸಿಕೊಂಡ ಕೃತಕ ತೆರೆಯನ್ನು ಸರಿಸುವ ಚಿತ್ರಾ ನಮ್ಮೊಳಗಿನ ಅರಿವಿಗೆ ತೊಡಕಾಗಿರುವ ಸಂಕುಚಿತತೆಯ ಪರದೆಯನ್ನೂ ಸರಿಸುತ್ತಾಳೆ.
Interested overseas readers may write to us at mup@manipal.edu about purchasing the book. -
Vaidehi Dhvani
₹275.00Author: Vaidehi
ಪ್ರಸ್ತುತ ಪುಸ್ತಕವು ಮುಂದಿನ ಕಾಲಕ್ಕೆ ವೈದೇಹಿಯವರ ಧ್ವನಿ ಮತ್ತು ನಿರೂಪಣೆಯನ್ನು ದಾಖಲಿಸುವ ಪ್ರಯತ್ನವಾಗಿದೆ. ಅವರ ಕಥೆಗಳ ನಿರೂಪಣೆಯು ಕುಂದಾಪುರದ ಆಡುಭಾಷೆಯ ಶ್ರೀಮಂತಿಕೆಯಲ್ಲಿ ಮತ್ತು ಅದರಾಚೆಗೆ ಕನ್ನಡದ ಸಂಸ್ಕೃತಿಯೊಂದಿಗೆ ಏಕತೆಯ ಭಾವನೆಯೊಂದಿಗೆ ಎತ್ತರದಲ್ಲಿದೆ. ಐದು ಕಥೆಗಳು ಮತ್ತು ಏಳು ಕವಿತೆಗಳ ಈ ಪುಸ್ತಕವನ್ನು ಅವರು ಓದಿದ್ದಾರೆ. ಈ ಆಯ್ದ ಕಥೆಗಳು ಈಗಾಗಲೇ ಪ್ರಕಟವಾದವುಗಳಾಗಿವೆ ಆದರೆ ಅದನ್ನು ವಿಭಿನ್ನವಾಗಿಸುವುದು ಅವುಗಳನ್ನು ಓದುವ ವಿಧಾನವಾಗಿದೆ. ಪ್ರತಿ ಪದ, ಪ್ರತಿ ವಿರಾಮಚಿಹ್ನೆ, ಪ್ರತಿ ವಿರಾಮ, ಅವರ ಧ್ವನಿಯಲ್ಲಿ ತುಂಬಾ ವಿಭಿನ್ನವಾಗಿದೆ. “ವೈದೇಹಿ ಧ್ವನಿ” ಎಂಬ ಹೆಸರನ್ನು ಅವರ ಧ್ವನಿಯ ನಾದದ ಗುಣಮಟ್ಟವನ್ನು ಪ್ರತಿನಿಧಿಸಲು ನೀಡಲಾಗಿದೆ ಆದರೆ ಅದು ಕೇಳುಗ ಅಥವಾ ಓದುಗನಲ್ಲಿ ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಆಕೆಯ ಕಥೆಗಳನ್ನು ಅಧ್ಯಯನ ಮಾಡಲು ಬಯಸುವವರಿಗೆ ಅನುಕೂಲವಾಗುವಂತೆ ಆಡಿಯೋ ಸಿಡಿಯು ಪಠ್ಯ ರೂಪದಲ್ಲಿ ಪುಸ್ತಕವನ್ನು ಸಹ ಹೊಂದಿದೆ. ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ ಅನೇಕ ವಿದ್ಯಾರ್ಥಿಗಳು ಅಧ್ಯಯನದ ವಿಷಯವಾಗಿ ತೆಗೆದುಕೊಳ್ಳುತ್ತಾರೆ.
Interested readers may write to us at mup@manipal.edu about purchasing the book.
Also available on

-
Wodeyara Kaalada Mysurina Adalitha matthu Saamajika Ithihasa
₹600.00Author: Pavamana R D, D S Achuta Rao
ವಿಜಯನಗರ ಸಾಮ್ರಾಜ್ಯದ ಉತ್ತರಾಧಿಕಾರಿಗಳೆಂದು ಹೆಸರಾಗಿರುವ ಮೈಸೂರಿನ ಒಡೆಯರು ಕರ್ನಾಟಕದ ಇತಿಹಾಸಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ರಾಜಕೀಯ ರಂಗದಲ್ಲಿ ಮಾತ್ರವಲ್ಲದೆ, ಸಾಂಸ್ಕೃತಿಕ, ಸಾಹಿತ್ಯಿಕ ಹಾಗೂ ಕಲಾರಂಗಗಳಲ್ಲೂ ಮೈಸೂರು ಅರಸರು ವಿಜಯನಗರದ ಶ್ರೇಷ್ಠ ಪರಂಪರೆಯನ್ನು ಮುಂದುವರೆಸಿದರು. ರಾಜಒಡೆಯರ್, ರಣಧೀರ ಕಂಠೀರವ, ಚಿಕ್ಕದೇವರಾಜ ಒಡೆಯರ್ ಅವರ ಆಳ್ವಿಕೆಯ ಕಾಲಘಟ್ಟದಲ್ಲಿ ಮೈಸೂರು ಸರ್ವಾಂಗೀಣ ಪ್ರಗತಿ ಸಾಧಿಸಿತು. ಈ ವಂಶದ ಮೊದಲ ಪ್ರಮುಖ ಅರಸು ರಾಜ ಒಡೆಯರ್ರಿಂದ ಆರಂಭಿಸಿ ಮೈಸೂರು ಆಂಗ್ಲರ ಅಧೀನವಾಗುವವರೆಗಿನ ಆಡಳಿತ ಹಾಗೂ ಸಾಮಾಜಿಕ ಇತಿಹಾಸ ಇಲ್ಲಿದೆ. ಮೈಸೂರು ಸಂಸ್ಥಾನದ ಎರಡು ಮಹತ್ವಪೂರ್ಣ ಶತಮಾನಗಳ ಕಾಲದ ಆಡಳಿತ, ಕಂದಾಯ ನೀತಿಗಳು, ನ್ಯಾಯಾಡಳಿತ, ಸೈನ್ಯ ವ್ಯವಸ್ಥೆ, ಪ್ರಾಂತೀಯ ಹಾಗೂ ಸ್ಥಳೀಯ ಆಡಳಿತ, ಸಾಮಾಜಿಕ ಜೀವನ ಹಾಗೂ ಧರ್ಮ, ಶಿಕ್ಷಣ, ಸಾಹಿತ್ಯ, ಕಲೆ ಮತ್ತು ವಾಸ್ತುಶಿಲ್ಪ ಮತ್ತು ಆಸ್ಥಾನ ಸಂಸ್ಕೃತಿ ಹೀಗೆ ಬಹುಮುಖೀ ನೆಲೆಗಳ ವಿಸ್ತಾರವಾದ, ಅಧ್ಯಯನಪೂರ್ಣ ಸಂಶೋಧನಾ ವರದಿಯಾಗಿ ಇದು ಸ್ವಾತಂತ್ರೋತ್ತರ ತಲೆಮಾರಿನ ವಿದ್ವಾಂಸರ ಸಂಶೋಧನಾ ವೈಖರಿಗೆ ಒಂದು ಅತ್ಯುತ್ತಮ ಉದಾಹರಣೆ ಎನ್ನಬಹುದು. ಕರ್ನಾಟಕದ ಅದರಲ್ಲೂ ಮೈಸೂರಿನ ಒಡೆಯರ ಇತಿಹಾಸದ ಬಗೆಗೆ ಸಂಶೋಧನೆಗಳು ಇನ್ನೂ ಕಣ್ತೆರೆಯುತ್ತಿದ್ದ ಕಾಲದಲ್ಲಿ ಡಿ. ಎಸ್. ಅಚ್ಯುತರಾಯರ ಈ ಸಂಶೋಧನ ಕಾರ್ಯ ಮಹತ್ವಪೂರ್ಣವಾದುದು. ಅಂದಿಗೆ ಲಭ್ಯವಿದ್ದ ಎಲ್ಲಾ ಬಗೆಯ ಮೂಲ ಹಾಗೂ ಆನುಷಂಗೀಕ ಆಕರಗಳನ್ನು ಬಳಸಿಕೊಂಡು, ಸಂಶೋಧನೆಯ ಎಲ್ಲಾ ಚೌಕಟ್ಟಿನೊಳಗೆ ವಸ್ತುನಿಷ್ಠವಾಗಿ ರೂಫುಗೊಂಡಿದೆ ಈ ಕೃತಿ. ಸಾಮಾಜಿಕ ಇತಿಹಾಸವನ್ನು ಪುನರ್ ರೂಪಿಸುವಾಗಲಂತೂ ಸಮಕಾಲೀನ ಸಾಹಿತ್ಯದ ಎಲ್ಲಾ ರೂಪಗಳನ್ನೂ ಇಲ್ಲಿ ಬಳಸಿಕೊಳ್ಳಲಾಗಿದೆ. ಅಗತ್ಯ ವಿರುವೆಡೆಯಲ್ಲಿ ಒಂದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿನ ಉಲ್ಲೇಖಗಳು, ಟಿಪ್ಪಣಿಗಳೂ, ವಿವರಣೆಗಳೂ ಈ ಸಂಶೋಧನೆಯ ಮೌಲ್ಯವನ್ನು ಹೆಚ್ಚಿಸಿವೆ. ಸಂಶೋಧನೆಗೆ ಪೂರಕವಾಗಿ ಗ್ರಂಥಋಣ, ನಕ್ಷೆಗಳು, ಸಂಕ್ಷೇಪಾಕ್ಷರಗಳು ಹಾಗೂ ಒಡೆಯರ ವಂಶಾವಳಿ ನೀಡಲಾಗಿದೆ. ಆಧಾರಗಳ ಮೇಲಿನ ಟಿಪ್ಪಣಿಯು ಸಂಶೋಧಕರಿಗೆ ತಮ್ಮ ಕಾರ್ಯಕ್ಷೇತ್ರದ ಮೇಲಿನ ಒಡೆತನದ ದ್ಯೋತಕ. ಅಪಾರ ಸಂಖ್ಯೆಯ ಹಸ್ತಪ್ರತಿಗಳ ಮತ್ತು ಶಾಸನಗಳ ಬಳಕೆ ಈ ಕೃತಿಯ ಹೆಗ್ಗಳಿಕೆ.
Interested readers may write to us at mup@manipal.edu about purchasing the book.
-
Madhavi Kathana Kavya
₹195.00Author: ONV Kurup, Translator: Parvathi G Aithal
ವ್ಯಾಸ ಮಹಾಭಾರತದ ಉದ್ಯೋಗ ಪರ್ವದಲ್ಲಿ ಬರುವ ಒಂದು ಉಪಾಖ್ಯಾನವನ್ನಾಧರಿಸಿ ಬರೆದ ಒಂದು ಕಾವ್ಯವಿದು. ಮೂಲಕಥೆಯಲ್ಲಿ ಮಾಧವಿಯ ಶೋಷಣೆ ಎದ್ದು ಕಾಣುವುದಿಲ್ಲ. ವಿಶ್ವಾಮಿತ್ರ ಶಿಷ್ಯನಾದ ಗಾಲವನು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಹೊರಡುವಾಗ ‘ಗುರುದಕ್ಷಿಣೆಯಾಗಿ ಏನನ್ನು ಕೊಡಲಿ?’ ಎಂದು ಕೇಳುತ್ತಾನೆ. ವಿಶ್ವಾಮಿತ್ರರು ಗುರುದಕ್ಷಿಣೆ ಬೇಡವೆಂದರೂ ಕೇಳುವುದಿಲ್ಲ. ಕೊನೆಗೆ ವಿಶ್ವಾಮಿತ್ರರು, ‘ಒಂದು ಕಿವಿ ಮಾತ್ರ ಕಪ್ಪಾಗಿರುವ ಎಂಟುನೂರು ಶ್ವೇತಾಶ್ವಗಳನ್ನು ಕಾಣಿಕೆಯಾಗಿ ತೆಗೆದುಕೊಂಡು ಬಾ’ ಎಂದು ಹೇಳುತ್ತಾರೆ. ಆದರೆ, ಅಂಥ ವಿಶೇಷ ಗುಣದ ಕುದುರೆಗಳು ಬಹಳ ದುರ್ಲಭವಾದುವೆಂಬುದನ್ನು ಅರಿತಾಗ ಗಾಲವ ದಾನಶೂರ ಯಯಾತಿ ಮಹಾರಾಜನ ಬಳಿ ಸಹಾಯ ಬೇಡಲು ಹೋಗುತ್ತಾನೆ. ಆಗಷ್ಟೇ ದೊಡ್ಡದೊಂದು ಯಾಗ ಮುಗಿಸಿದ ಯಯಾತಿಯ ಬಳಿ ಅಶ್ವಗಳಿಲ್ಲ. ಆದರೆ, ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳುವುದಕ್ಕೋಸ್ಕರ ಯಯಾತಿ ತನ್ನ ಮಗಳು ಮಾಧವಿಯನ್ನು ಗಾಲವನ ವಶಕ್ಕೆ ಬಿಟ್ಟು ‘ರೂಪಸಿಯಾದ ಈಕೆಯನ್ನು ಬೇಕಾದ ಹಾಗೆ ಬಳಸಿಕೊಂಡು ನಿನಗೆ ಬೇಕಾದ ಅಶ್ವಗಳನ್ನು ಪಡೆ’ ಅನ್ನುತ್ತಾನೆ. ಹಾಗೆ ಗಾಲವನು ಮಾಧವಿಯನ್ನು ಮೂರು ಮಂದಿ ರಾಜರ ಬಳಿಗೆ ಕರೆದೊಯ್ದು ಅವರಿಂದ ತಲಾ ಇನ್ನೂರು ಅಶ್ವಗಳನ್ನು ಪಡೆದು ಆ ರಾಜರುಗಳಿಗೆ ಒಂದು ವರ್ಷದ ಮಟ್ಟಿಗೆ ಉಪಯೋಗಿಸಿಕೊಳ್ಳಲು ಮಾಧವಿಯನ್ನು ಒಪ್ಪಿಸುತ್ತಾನೆ. ಮೂಲ ಕಥೆಯಲ್ಲಿ ಮಾಧವಿಯ ಮನಸ್ಸಿನ ಸಂಘರ್ಷಗಳು ವ್ಯಕ್ತವಾಗಿಲ್ಲ. ‘ಪುರುಷರಿಂದ ಲೈಂಗಿಕವಾಗಿ ಎಷ್ಟು ಸಾರಿ ಬಳಸಲ್ಪಟ್ಟರೂ ನನ್ನ ಕನ್ಯತ್ವ ಉಳಿಯುವಂಥ ವರ ನನಗಿದೆಯಾದ್ದರಿಂದ ನಾನು ನಿನಗೆ ಸಹಾಯ ಮಾಡಬಲ್ಲೆ’ ಎಂದು ಗಾಲವನ ಬಳಿ ಅವಳೇ ಹೇಳುತ್ತಾಳೆ . ಓಎನ್ವಿ ಕುರುಪ್ ಬರೆದ ಈ ಕೃತಿಯಲ್ಲಿ ಅವರು ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಇಲ್ಲಿ ಇಡೀ ಕಥೆಯನ್ನು ಪುರುಷರಿಂದ ಘೋರ ಅನ್ಯಾಯಕ್ಕೊಳಗಾಗಿ ಮಾನಸಿಕ ಯಾತನೆಯನ್ನು ಅನುಭವಿಸಿರಬಹುದಾದ ಮಾಧವಿಯ ದೃಷ್ಟಿಯಿಂದ ಬರೆಯಲಾಗಿದೆ. ಆದ್ದರಿಂದ ಇದರ ಸ್ತ್ರೀವಾದಿ ಓದು ಒಂದು ವಿಶಿಷ್ಟ ಅನುಭವವನ್ನು ನೀಡುತ್ತದೆ.ಮಲಯಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಓಎನ್ವಿಕುರುಪ್ ಅವರ ‘ಸ್ವಯಂವರಂ’ ಎಂಬ ಖಂಡಕಾವ್ಯದ ಭಾವಾನುವಾದವಿದು. ಮಹಾಭಾರತದ `ಉದ್ಯೋಗ ಪರ್ವ’ ದಲ್ಲಿ ಬರುವ ಒಂದು ಉಪಾಖ್ಯಾನದಲ್ಲಿ ಪುರುಷ ವರ್ಗದಿಂದ ಘೋರವಾಗಿ ಶೋಷಣೆಗೊಳಗಾದ ಮಾಧವಿ ಈ ಕಥೆಯ ನಾಯಕಿಯಾಗಿದ್ದು ಇಡೀ ಕಾವ್ಯವೇ ಅವಳ ದೃಷ್ಟಿಕೋನದಿಂದ ರಚಿತವಾಗಿದ್ದರಿಂದ ಸ್ತ್ರೀವಾದಿ ಓದಿಗೆ ಒಳಪಡಿಸಲು ಅತ್ಯಂತ ಸೂಕ್ತವಾದ ಕೃತಿಯಿದು ಎಂದೆನ್ನಿಸಿ ಅನುವಾದಕಿ ಅದರ ಶೀರ್ಷಿಕೆಯನ್ನು ‘ಮಾಧವಿ ಕಥನ ಕಾವ್ಯ’ವೆಂದು ಬದಲಾಯಿಸಿದ್ದಾರೆ . ಇದನ್ನು ಓದಿದಾಗೆಲ್ಲ ರಾಮಾಯಣದ ಸೀತೆಯ ನೆನಪಾಗುತ್ತದೆ.
Interested customers may write to us at mup@manipal.edu about purchasing the book.
Also available on

-
Colours of the Rainbow
₹450.00Author: Umesh Bhat
The author, through Colours of the Rainbow, tells us that everyone is destined for his/her own rainbow with a pot of gold at the other end if, one has a will, works hard on it, and with a little bit of luck. The book narrates the dream journey of a village boy.
Interested readers may write to us at mup@manipal.edu about purchasing the book.


















Be the first to review “Dodda Samagara Nalmoga”
You must be logged in to post a review.