Sangeetashastragranthachandrike Volume-2
₹650.00
Author: S Karthik
ಸಂಗೀತಶಾಸ್ತ್ರಗ್ರಂಥಚಂದ್ರಿಕೆ ಯ ಎರಡನೆಯ ಸಂಪುಟವು ಭಾರತೀಯ ಸಂಗೀತದ ಶಾಸ್ತ್ರಕಾರರು ಮತ್ತು ಶಾಸ್ತ್ರಗ್ರಂಥಗಳ ಚರಿತ್ರೆಯನ್ನು ಒಳಗೊಂಡ ಕೃತಿಯಾಗಿದೆ. ಇದರಲ್ಲಿ ಪ್ರಕಟಿತ, ಅಪ್ರಕಟಿತ, ಲಭ್ಯ, ಅಲಭ್ಯ ಶಾಸ್ತ್ರಗ್ರಂಥಗಳ ಬಗೆಗೆ ಮೂಲ ಆಕರಗಳನ್ನೇ ಆಮೂಲಾಗ್ರವಾಗಿ ಗಮನಿಸಿ, ವಿಶದವಾಗಿ ಪರಿಚಯ ಮಾಡಿಕೊಡಲಾಗಿದೆ. ಎಷ್ಟೋ ಜನ ಅಜ್ಞಾತಶಾಸ್ತ್ರಕಾರರು ಮತ್ತು ಶಾಸ್ತ್ರಕೃತಿಗಳ ಬಗೆಗೆ ಖಚಿತವಾದ ಮಾಹಿತಿ ಆಕರ ಸಾಮಗ್ರಿಯ ಸಹಿತ ಇಲ್ಲಿ ದೊರಕುತ್ತದೆ. ಕರ್ನಾಟಕ ಸಂಗೀತ ಎಂಬ ಹೆಸರು ಹೇಗೆ ಬಂತೆಂಬ ವಿಚಾರದಲ್ಲಿ ಸ್ಪಷ್ಟವಾದ ವಿವರಗಳು ಇಲ್ಲಿ ದಾಖಲಾಗಿವೆ. ಹಿಂದಿನ ಅಧ್ಯಯನಗಳಿಗಿಂತ ಹೆಚ್ಚು ವಸ್ತುನಿಷ್ಠ ಮಾಹಿತಿ ಇಲ್ಲಿ ದೊರಕುತ್ತದೆ. ಕ್ರಿ.ಶ.ಸು ೧೨೫೦-೧೪೦೦ರ ನಡುವಿನ ಅವಧಿಯಲ್ಲಿದ್ದ ಶಾಸ್ತ್ರಕಾರರು ಮತ್ತು ಆ ಅವಧಿಯಲ್ಲಿ ರಚಿತವಾಗಿರುವ ಶಾಸ್ತ್ರಗ್ರಂಥಗಳ ಬಗೆಗೆ ರಚಿತವಾಗಿರುವ ಈ ಕೃತಿಯ ದ್ವಿತೀಯ ಸಂಪುಟವು ಕನ್ನಡ ಭಾಷೆಯಲ್ಲಿ ರಚನೆಗೊಂಡಿರುವ ವಿರಳ ಅಪರೂಪದ ಕೃತಿಗಳಲ್ಲಿ ಒಂದಾಗಿದೆ.
Interested customers may write to us at mup@manipal.edu about purchasing the book.
| Also available on |
| Categories: | Indian Regional Languages, Kannada |
|---|
| Format |
|---|
Related products
-
Daddal Kaadina Mouna
₹240.00Author: Shashiraj Kavoor
ದಡ್ಡಾಲ್ ಕಾಡಿನ ಮೌನ’ ಕಿರು ಕಾದಂಬರಿಯಲ್ಲಿ ಶಶಿರಾಜ್ ಅವರು ಕೊರಗ ಸಮುದಾಯದ ಬಗ್ಗೆ ಸಾಕಷ್ಟು ಕ್ಷೇತ್ರಕಾರ್ಯದ ಅಧ್ಯಯನ ನಡೆಸಿ, ಆಧುನಿಕತೆಯ ಸಂಕ್ರಮಣಕಾಲದಲ್ಲಿನ ಕೊರಗರ ಬದುಕಿನ ಸಂಗತಿಗಳನ್ನು ಸಾಂಸ್ಕೃತಿಕ ನೆಲೆಯಲ್ಲಿ ನೋಡಲು ಪ್ರಯತ್ನಿಸಿದ್ದಾರೆ. ಅದರ ಜೊತೆಗೆಯೇ ತುಳುವ ಸಂಸ್ಕೃತಿಯ ಗುತ್ತುವಿನಂತಹ ಪರಂಪರೆಯ ಆಡಳಿತದ ಚೌಕಟ್ಟಿನಲ್ಲಿ ನಡೆಯುತ್ತಿದ್ದ ದೈವಾರಾಧನೆಯ ಸ್ವರೂಪ ಮತ್ತು ಸಮಸ್ಯೆಗಳನ್ನು ಕೂಡಾ ಪೋಣಿಸಿದ್ದಾರೆ. ಕೆಲವು ದಶಕಗಳ ಹಿಂದೆ ತುಳುನಾಡಿನಲ್ಲಿ ನಡೆಯುತ್ತಿದ್ದಂತಹ ವಿದ್ಯಮಾನಗಳನ್ನು ಕುರಿತ ಕೆಲವು ಸೂಕ್ಷ್ಮ ನೋಟಗಳು ಇಲ್ಲಿನ ಕಥಾ ಸಂವಿಧಾನದಲ್ಲಿ ಸೇರಿಕೊಂಡಿವೆ. ಇನ್ನೊಂದು ಕಡೆ ಆಧುನಿಕ ವೈದ್ಯಕೀಯ ಪದ್ಧತಿಯು ಬಂದ ಬಳಿಕವೂ ದೇಸಿ ಪರಂಪರೆಯ ವೈದ್ಯಪದ್ಧತಿ ಮತ್ತು ನಂಬಿಕೆಗಳು ಕ್ರಿಯಾಶೀಲವಾಗಿ ಇರುವುದರ ವಾಸ್ತವದ ಚಿತ್ರಣವೂ ಅನಾವರಣವಾಗಿದೆ. ಒಂದು ವ್ಯವಸ್ಥೆಯ ಒಳಗಿನ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಏಕಕಾಲಕ್ಕೆ ಕ್ರಿಯಾಶೀಲವಾಗಿ ಇರುವ ವೈರುಧ್ಯದ ಸಂಗತಿಗಳೂ ಇಲ್ಲಿ ಕಾಣಿಸುತ್ತವೆ. ಕೊರಗಸಮುದಾಯದ ಸಂಕೀರ್ಣ ಭಾವನೆಗಳ ತೊಳಲಾಟವನ್ನು ಇಲ್ಲಿ ಗ್ರಹಿಸಬಹುದು. ಕುಲಸಂಬಂಧಿ ಆಚರಣೆಗಳನ್ನು ಮಾಡುತ್ತಲೂ ಅವುಗಳಲ್ಲಿನ ಅಮಾನವೀಯ ಅಂಶಗಳನ್ನು ತೊಡೆದುಹಾಕುವ ಮನೋಧರ್ಮವು ಕಾದಂಬರಿಯ ಬೆಳವಣಿಗೆಯಲ್ಲಿ ಕಾಣಿಸುತ್ತದೆ.
-
Sangita Lokadrishti
₹295.00Author: Sumangala
ತಂದೆ-ಮಗಳ ಸುರಬಹಾರಿನ ಸಂಗೀತಬಂಧದ ಚಿತ್ರಣದಿಂದ ಆರಂಭಗೊಳ್ಳುವ ಈ ಕಿರುಕೃತಿಯು ಸಾಗರ ವೀಣೆ ರೂಪುಗೊಳಿಸಿದ ಇನ್ನೊಂದು ತಂದೆ-ಮಗಳ ಸಂಗೀತಬಂಧದ ಚಿತ್ರಣದೊಂದಿಗೆ ಮುಕ್ತಾಯವಾಗುತ್ತದೆ. ಇಲ್ಲಿ ನಾಲ್ವರು ಸಂಗೀತಗಾರರ ಬದುಕಿನ ಕೆಲವು ಸನ್ನಿವೇಶಗಳು, ಸಂಗೀತಪಯಣದಲ್ಲಿ ಅವರು ಸಾಗಿದ ಹಾದಿ, ಕಠಿಣ ಸಂದರ್ಭಗಳು, ಅವರ ಸಾಂಗೀತಿಕ ಮನೋಧರ್ಮ, ರಾಗರೂಪದ ಕುರಿತ ದೃಷ್ಟಿಕೋನ, ಇತ್ಯಾದಿ ಅಂಶಗಳ ಸ್ಥೂಲ ಚಿತ್ರಣವಿದೆ.
ಸುರಬಹಾರಿನ ದಂತಕಥೆಯೆಂದೇ ಹೇಳಬಹುದಾದ ವಿದುಷಿ ಅನ್ನಪೂರ್ಣಾ ದೇವಿಯವರ ಖಾಸಗಿ ಬದುಕು, ಏಕಾಂತ ನಿಗೂಢವೆನ್ನಿಸುವ ಹಾಗೆಯೇ ಮೈಹರ್ ಘರಾನೆಯ ಸ್ವರಸಂಪತ್ತನ್ನು ಶಿಷ್ಯರಿಗೆ ಧಾರೆಯೆರೆದು ಕಲಿಸುತ್ತ, ಹಲವರನ್ನು ಮೇರು ಕಲಾವಿದರಾಗಿ ರೂಪುಗೊಳಿಸಿದ ಬಗೆಯೂ ಅನನ್ಯ. ಕೃತಿಯಲ್ಲಿ ಚಿತ್ರಿಸಿದ ಇನ್ನುಳಿದ ಮೂವರು ಸಂಗೀತಗಾರರು ನಮ್ಮ ನೆರೆಯ ಪಾಕಿಸ್ತಾನದ ಶಾಸ್ತ್ರೀಯ ಸಂಗೀತ ಪರಂಪರೆಯನ್ನು ಇನ್ನಷ್ಟು ಸಮೃದ್ಧಗೊಳಿಸಿದವರು.
“ಏ ದಯ್ಯಾ… ಕಹಾಂ ಗಯೇ ವೇ ಲೋಗ್… ಬ್ರಿಜ ಕೆ ಬಸಯ್ಯಾ…”
ಮನುಷ್ಯರ ನಡುವೆ ಹತ್ತುಹಲವು ಬಗೆಯ ದ್ವೇಷದ ಗೋಡೆಗಳು ಎದ್ದು ನಿಂತಿರುವ ಇಂದಿನ ದಿನಮಾನದಲ್ಲಿ ಭಿನ್ನತೆಗಳಿದ್ದರೂ ಪರಸ್ಪರ ಸಂವಾದ ನಡೆಸುತ್ತಿದ್ದ ಆ ಜನರನ್ನು, ಆ ಕಾಲಘಟ್ಟವನ್ನು ಮತ್ತೆ ಕಂಡುಕೊಳ್ಳಲು ಬಹುಶಃ ಇಂತಹ ಸಂಗೀತಗಾರರ ಕೊರಳೊಳಗಿನ, ಬೆರಳೊಳಗಿನ ಸ್ವರಗಳೇ ನಮ್ಮ ಕೈಹಿಡಿದು ಮುನ್ನಡೆಸಬೇಕಿದೆ.
Interested readers may write to us at mup@manipal.edu about purchasing the book.
-
Kannadadalli Patthyaparishkarana- Ondu Kaipidi
₹150.00Author: N T Bhat
ಸ್ವಾನುಭವವಷ್ಟನ್ನೇ ಬಂಡವಾಳವಾಗಿರಿಸಿಕೊಂಡು ತೊಡಗಿದ ಉದ್ಯಮ ಈ ಹೊತ್ತಗೆಯ ರಚನೆ. ಕನ್ನಡದಲ್ಲಿ ಕರಡಚ್ಚು ಪ್ರತಿಗಳನ್ನು ತಿದ್ದಿಕೊಟ್ಟ ಅನುಭವಗಳನ್ನು ತುಸು ವಿಸ್ತರಿಸಿ ಸಣ್ಣ ಕೈಪಿಡಿಯ ರೂಪದಲ್ಲಿ ತಂದರೆ ಒಳ್ಳೆಯದಲ್ಲವೇ ಎಂಬ ಆಲೋಚನೆ ಈ ಕಿರುಹೊತ್ತಗೆಯ ರಚನೆಯ ಮೂಲ. -ಎನ್. – ತಿರುಮಲೇಶ್ವರ ಭಟ್ಟ ಡಾ. ತಿರುಮಲೇಶ್ವರ ಭಟ್ಟರು ದೀರ್ಘಕಾಲ ಅನುವಾದಕ್ಷೇತ್ರದಲ್ಲಿ (ಇಂಗ್ಲಿಷ್ನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷ್ಗೆ, ಜರ್ಮನ್ನಿಂದ ಇಂಗ್ಲಿಷ್ಗೆ, ಜರ್ಮನ್ನಿಂದ ಕನ್ನಡಕ್ಕೆ) ದುಡಿದವರು ಮತ್ತು ವಿವಿಧ ರೀತಿಯ ಪುಸ್ತಕಗಳ ಯೋಜನೆ, ಸಂಯೋಜನೆ, ಪುನರ್ನಿರೂಪಣೆ, ಸಂಪಾದನೆ ಮೊದಲಾದ ಕೆಲಸಗಳನ್ನು ಮಾಡಿದವರು. ಈಯೆಲ್ಲ ಕೆಲಸಗಳಲ್ಲಿ ಸತತವಾಗಿ ಒಳಗೊಂಡಿರುವುದು ಕರಡಚ್ಚು ತಿದ್ದುವ ಕೆಲಸ. ಯಾವುದೇ ಕಾರ್ಯಕ್ರಮದಲ್ಲಿದ್ದರೂ ಅದರ ಎಡೆಯೆಡೆಯ ಬಿಡುವಿನಲ್ಲಿ ಒಂದಿಷ್ಟು ಕರಡಚ್ಚು ತಿದ್ದುವ ಕೆಲಸವನ್ನು ಸತತವಾಗಿ ಮಾಡುತ್ತಲೇ ಬಂದವರು. ಪಠ್ಯಪರಿಷ್ಕರಣದ ಹಲವು ಹಂತಗಳನ್ನು ಚೆನ್ನಾಗಿ ಬಲ್ಲ ಅವರು ತಮ್ಮಲ್ಲಿರುವ ಮಾಹಿತಿಯನ್ನೂ ಅನುಭವವನ್ನೂ ಕ್ರೋಡೀಕರಿಸಿ ಕನ್ನಡದಲ್ಲಿ ಪಠ್ಯಪರಿಷ್ಕರಣದ ಆವಶ್ಯಕತೆಯೇನೆಂಬುದು ಸರಳವಾಗಿ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಅವರಿಂದ ಭಾಷಾಕ್ಷೇತ್ರಕ್ಕೆ ಇನ್ನಷ್ಟು ಸೇವೆ ಸಲ್ಲಲಿ ಎಂಬುದು ಮನದಾಳದ ಆಶಯ. – ಪಾದೇಕಲ್ಲು ವಿಷ್ಣು ಭಟ್ಟ.
Interested readers may write to us at mup@manipal.edu about purchasing the book.
Also available on

-
Christa Shaka 1800 Ra Modalina Mysooru ithihaasa
₹295.00Author: D S Achuta Rao Translator: S Narendra Prasad
೧೮೦೦ ಕ್ರಿ. ಶ. ದ ಹಿಂದಿನ ಮೈಸೂರು ಇತಿಹಾಸವು ಪ್ರೊ. ಡಿ ಎಸ್ ಅಚ್ಯುತ ರಾವ್ ಅವರ ಜೀವನ ಮತ್ತು ಕೆಲಸದ ಬಗ್ಗೆ. ಮೈಸೂರು ಇತಿಹಾಸದ ಕುರಿತಾದ ಅವರ ಸಂಶೋಧನೆಯು 1940-65ರ ಅವಧಿಯಲ್ಲಿ ಅವರು ಪ್ರಕಟಿಸಿದ ಹತ್ತು ಸೂಚ್ಯಂಕ ಲೇಖನಗಳಿಂದ ಪ್ರತಿನಿಧಿಸುತ್ತದೆ. ಅವರು ಭಾರತದ ಇತಿಹಾಸ ಮತ್ತು ಅದರ ಅದ್ಭುತ ಭೂತಕಾಲವನ್ನು ಸಕ್ರಿಯವಾಗಿ ಜನಪ್ರಿಯಗೊಳಿಸಿದರು. ಮಹಾರಾಜಾಸ್ ಕಾಲೇಜ್ ಹಿಸ್ಟರಿ ಸೊಸೈಟಿ, ಭಾರತದ ವಸಾಹತು ಸಂಶೋಧಕರು ಮತ್ತು ಕನ್ನಡ ವಿಶ್ವಕೋಶದಲ್ಲಿ ಮೈಸೂರು ಸರ್ಕಾರದ ಉಪಕ್ರಮದಿಂದ ಭಾರತೀಯ ಇತಿಹಾಸದಲ್ಲಿ ಉಪಕ್ರಮಗಳನ್ನು ಪ್ರಸ್ತುತಪಡಿಸುವುದರಿಂದ ಅಂತಹ ಮೂರು ಲೇಖನಗಳನ್ನು ಸೇರಿಸಲಾಗಿದೆ. ಎರಡನೇ ಭಾಗದಲ್ಲಿ ಅವರ ಜೀವನಚರಿತ್ರೆಯಲ್ಲಿ, ಅವರ ವಿದ್ಯಾರ್ಥಿಗಳು ಮತ್ತು ಮಕ್ಕಳು ಶಿಕ್ಷಕ ಮತ್ತು ತಂದೆಯಾಗಿ ಅವರ ಜೀವನದ ಬಗ್ಗೆ ಬರೆದಿದ್ದಾರೆ, ಅವರ ಅವಧಿಯ ಸಂದರ್ಭವನ್ನು ಒದಗಿಸಿದ್ದಾರೆ. ಪುಸ್ತಕವು ಕಳೆದ ಶತಮಾನದ ಮಧ್ಯದಲ್ಲಿ ಇತಿಹಾಸ ಸಂಶೋಧನೆಗೆ ಆಸಕ್ತಿದಾಯಕ ವಿಂಡೋವನ್ನು ಪ್ರಸ್ತುತಪಡಿಸುತ್ತದೆ.
Interested readers may write to us at mup@manipal.edu about purchasing the book.
-
The Prince
₹199.00Author: K N Venkatasubba Rao
ಮೆಖೈವಲ್ಲಿ ನವೋದಯ ರಾಜತಾಂತ್ರಿಕ, ತತ್ವಜ್ಞಾನಿ, ಬರಹಗಾರ. ಇಟಲಿಯ ಫ್ಲಾರೆನ್ಸ್ ನಗರದ ಬಡಕುಟುಂಬದಲ್ಲಿ 1469ರಲ್ಲಿ ಜನಿಸಿದ ಮೆಖೈವಲ್ಲಿ ತನ್ನ 21ನೆಯ ವಯಸ್ಸಿನಲ್ಲಿ ಫ್ಲಾರೆಂಟೈನ್ ಪ್ರಾಂತ್ಯದ ರಾಜಕೀಯ ರಂಗ ಪ್ರವೇಶಿಸಿದ. ಫ್ಲಾರೆನ್ಸಿನ ಆಡಳಿತಕ್ಕೆ ಅಗತ್ಯ ಬೇಹುಗಾರಿಕೆ ಮಾಹಿತಿ ಒದಗಿಸುವುದು ಮೆಖೈವಲ್ಲಿಯ ಹೊಣೆಯಾಗಿತ್ತು. ಅಧಿಕಾರದ ಗಳಿಕೆ, ಬಳಕೆ ಮತ್ತು ರಕ್ಷಣೆಯ ನಿಟ್ಟಿನಲ್ಲಿ ಮನುಷ್ಯ ಪ್ರಪಂಚಕ್ಕೇ ಅನ್ವಯವಾಗಬಲ್ಲಂತಹ ಮಾರ್ಮಿಕವಾದ ಬೃಹತ್ ವಿನ್ಯಾಸ ಅವನೊಳಗೆ ರೂಪುಗೊಳ್ಳುತ್ತಿತ್ತು. ಈ ಸಂದರ್ಭದಲ್ಲೇ ಫ್ಲಾರೆನ್ಸ್ ಗಣರಾಜ್ಯ ಪತನಗೊಂಡಿತು. ರಾಜಕುಟುಂಬದ ವಿರುದ್ಧ ಪಿತೂರಿಯ ಆರೋಪಕ್ಕೆ ಗುರಿಯಾಗಿ ಮೆಖೈವಲ್ಲಿ ಅಧಿಕಾರಭ್ರಷ್ಟನಾಗಬೇಕಾಯಿತು. ತನ್ನ ಜೀವಿತದ ಮುಂದಿನ ದಿನಗಳನ್ನು ಬರವಣಿಗೆಗೆ ಮೀಸಲಿಟ್ಟಿದ್ದ ಮೆಖೈವಲ್ಲಿ ಐವತ್ತೆಂಟನೆಯ ವಯಸ್ಸಿನಲ್ಲಿ ಅಂದರೆ 1527ರಲ್ಲಿ ವಿಧಿವಶನಾದ. 1532ರಲ್ಲಿ ಅಚ್ಚು ಕಂಡ ಅವನ `ಪ್ರಿನ್ಸಿಪೆ’, ಇಂಗ್ಲಿಷಿನಲ್ಲಿ `ದ ಪ್ರಿನ್ಸ್ ‘ ಆಗಿ 1640ರಲ್ಲಿ ಅಧಿಕೃತವಾಗಿ ಪ್ರಕಟಗೊಂಡಿತ್ತು. ಯುರೋಪಿನ ವ್ಯಾಪ್ತಿಯೊಳಗೆಯೇ ಸಾಕಷ್ಟು ವದಂತಿಗಳಿಗೆ ಒಳಗಾಗಿದ್ದ `ಪ್ರಿನ್ಸಿಪೆ’, `ದ ಪ್ರಿನ್ಸ್ ‘ ಆಗಿ ಮೆಚ್ಚುಗೆ ಮತ್ತು ಟೀಕೆಗಳನ್ನು ಇಂದಿಗೂ ಎದುರಿಸುತ್ತಲೇ ಇದೆ. ಮೆಖೈವಲ್ಲಿ `ಆಧುನಿಕ ರಾಜತಂತ್ರದ ಜನಕ’ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಅವನನ್ನು ಅರ್ಥಶಾಸ್ತ್ರದ ಕರ್ತೃ ಕೌಟಿಲ್ಯನೊಡನೆ ಹೋಲಿಸುವ ವಾಡಿಕೆ ಇದೆ. ಇದು ಎಷ್ಟು ಸಮಂಜಸ ಎಂಬುದರ ಬಗ್ಗೆಯೂ ಪ್ರಾಜ್ಞರ ನಡುವೆ ಜಿಜ್ಞಾಸೆಯಿದೆ.
Interested customers may write to us at mup@manipal.edu about purchasing the book.
Also available on

-
MOMO
₹450.00Author: Michael Ende ,Translator: Jayashree Kasaravalli
The fantasy novel originally written in German and translated into English, has been enjoyed by millions of readers worldwide. It has now been translated into Kannada as well. The novel has a very unusual story about time. The story describes how people in the modern era use the time, and a girl named MOMO teaches how it should be used. Humans have stolen time from modern societies, and a little girl of mysterious origin brings it back. In today’s society, the story has timeless relevance.
ನಗರದ ಅಂಚಿನಲ್ಲಿ ಹಾಳುಬಿದ್ದಿದೆ ಒಂದು ಆಂಪಿ ಥೀಯೇಟರ್. ಅಲ್ಲಿರುವ ದಿಕ್ಕಿಲ್ಲದ ಪುಟ್ಟ ಹುಡುಗಿ ಮೊಮೊ. ಒಂದು ದಿನ ಬೂದು ಬಣ್ಣದ ಬಟ್ಟೆ ತೊಟ್ಟು ದುಷ್ಟರು ಸದ್ದಿಲ್ಲದೇ ಬಂದು ನಗರವನ್ನು ಆಕ್ರಮಿಸಿಕೊಳ್ಳುತ್ತಾರೆ. ಅವರನ್ನು ಹಿಮ್ಮೆಟ್ಟಿಸುವ ಶಕ್ತಿಯಿರುವುದು ಮೊಮೊಗೆ ಮಾತ್ರ. ಅವಳು ಪ್ರೊಫೆಸರ್ ಹೋರಾ ಮತ್ತು ಅವರಲ್ಲಿರುವ ವಿಚಿತ್ರ ಆಮೆಯ ನೆರವಿನಿಂದ ಕಾಲದ ಸರಹದ್ದುಗಳನ್ನು ದಾಟಿ ಆ ದುಷ್ಟರ ಒಳಸಂಚುಗಳನ್ನು ಬಯಲುಮಾಡುತ್ತಿದ್ದಾಳೆ. ‘ಮೊಮೊ’ ಕಾಲವನ್ನು ಕದಿಯುವವರ ಕಥೆಯಾಗಿರುವ ಜೊತೆಗೇ ಕದ್ದ ಕಾಲವನ್ನು ಮತ್ತೆ ಜನರಿಗೆ ತಂದುಕೊಡುವ ಒಂದು ಮಗುವಿನ ಸಾಹಸಮಯ ಕಥೆಯು ಆಗಿದೆ.
Interested customers may write to us at mup@manipal.edu about purchasing the book.
-
Tapaalu Mani
₹140.00Author: Rabhindranath Tagore, Translator: Mounesh Badiger
ರಾಷ್ಟ್ರಕವಿ ರವೀಂದ್ರನಾಥ ಠಾಕೂರರ ‘ಡಾಕ್ ಘರ್’ ಬಹಳ ಪ್ರಸಿದ್ಧ ನಾಟಕ. ಮಗುವಿನ ಮನೋದೈಹಿಕ ಸಾಧ್ಯತೆಗಳನ್ನು ಕಲೆಯ ಸೂಕ್ಷ್ಮಕಣ್ಣಿನಿಂದ ನೋಡುವ ಎರಡಂಕದ ಪುಟ್ಟ ನಾಟಕವಿದು. ಇದು ಸೃಷ್ಟಿಸುವ ಮಾಯಾವಾಸ್ತವ ಬಹಳ ಅಪರೂಪವಾದದ್ದು. ಇದರ ಮುಖ್ಯ ಪಾತ್ರ ಮಗುವೇ ಆಗಿದ್ದರೂ ಇದರ ವಸ್ತು ಮಕ್ಕಳಿಗಳಿಂತ ಹೆಚ್ಚಾಗಿ ದೊಡ್ಡವರಿಗೇ ಅನ್ವಯವಾಗುವಂತಿದೆ. ಮೌನೇಶ ಬಡಿಗೇರರು ಇದನ್ನು ಉತ್ತರಕರ್ನಾಟಕದ ಭಾಷೆಗೆ ತಂದು ಕನ್ನಡದ ನಾಟಕವೇ ಎನ್ನುವಷ್ಟು ರೂಪಾಂತರಿಸಿದ್ದಾರೆ. ಇದರ ಪ್ರಯೋಗದ ಹೊಸ ಹೊಸ ಸಾಧ್ಯತೆಗಳನ್ನು ಕನ್ನಡ ರಂಗಭೂಮಿ ಇನ್ನೂ ಶೋಧಿಸಬೇಕಿದೆ.
Interested readers may write to us at mup@manipal.edu about purchasing the book.
Also available on

-
Saamajika Samanvayada Harikara – Kanaka Dasaru
₹285.00Author: P R Panchamukhi
ಕನಕದಾಸರ ಜೀವನವೇ ಸಮನ್ವಯತೆಯ ಪ್ರತಿಬಿಂಬವಾಗಿತ್ತು. ಹುಟ್ಟಿದ್ದು ಕುರುಬರ ಮನೆತನದಲ್ಲಿ; ಬೆಳೆದದ್ದು ಸಂಸಾರದ ಜಂಜಾಟದ ರಾಜಕೀಯ ಪರಿಸರದಲ್ಲಿ; ಜೀವನದ ಕೊನೆ ಕೊನೆಗೆ ಒಡನಾಟವನ್ನಿಟ್ಟುಕೊಂಡದ್ದು ಬ್ರಾಹ್ಮಣರ ಪರಿಸರದಲ್ಲಿ, ಅಂತಿಮವಾಗಿದ್ದದ್ದು ದಾಸಭಾವದ ನೆಲೆಗಟ್ಟಿನಲ್ಲಿ. ಹೀಗಾಗಿ, ಅವರು ಒಂದು ನೆಲೆಯಲ್ಲಿ ತಮ್ಮ ಸಮಗ್ರ ಜೀವನವನ್ನು ನಡೆಸಲಿಲ್ಲ. ಆದರೆ, ಅವರಿಗಿದ್ದುದು ಸಾಧಕನ ನೆಲೆ. ಹುಟ್ಟಿದ್ದು ಬೆಳೆದಿದ್ದು ನಾಯಕನ ಕುಲದಲ್ಲಿ, ಜೀವನದ ಹರೆಯ ಹಾಗೂ ಕೊನೆಯ ಕಾಲದಲ್ಲಿ ದೇವರ ದಾಸನಾಗುವ ಲವಲವಿಕೆಯನ್ನು ಬೆಳೆಸಿಕೊಂಡಿದ್ದು; ದ್ವೇಷ, ಕ್ರೌರ್ಯಗಳ ದಟ್ಟಿ ನಿಂದ ಭಕ್ತಿಯ ಮೆಟ್ಟಿಲುಗಳೆಡೆಗೆ ಸಾಗಿದ್ದು. ಹೀಗೆ ಕನಕದಾಸರ ಜೀವನವು ಪರಸ್ಪರ ವಿರೋಧಗಳ ಬೀಡಾಗಿದ್ದರೂ ಅಂತರಂಗದಲ್ಲಿ ಅದು ಸಮನ್ವಯತೆಯ ನೆಲೆಯನ್ನು ಮೈಗೂಡಿಸಿ ಕೊಂಡಿತ್ತು. ಕನಕದಾಸರು ಸಮಗ್ರವಾದ ಸಮನ್ವಯ ದೃಷ್ಟಿಯ ಹರಿಕಾರರೆನಿಸಿದರು.
Interested readers may write to us at mup@manipal.edu about purchasing the book.
















Be the first to review “Sangeetashastragranthachandrike Volume-2”
You must be logged in to post a review.