-
Pu Shri Sanskriti Sampada
₹850.00Author: Prabhakar Joshi and Pu Guruprasad Bhat
ಕನ್ನಡನಾಡಿನ ವಿಶಿಷ್ಟ, ಬಹುಶ್ರುತ ವಿದ್ವಾಂಸ ಪು. ಶ್ರೀನಿವಾಸ ಭಟ್ಟ [೧೯೩೯-೨೦೧೧] ಅವರ ಸಂಸ್ಕೃತಿಯ ಕುರಿತ ಲೇಖನಗಳ ಸಂಕಲನವಿದು. ನಿಶ್ಚಿತ ನಿರ್ವಚನಕ್ಕೆ ಸಿಗದ ಅಸಾಮಾನ್ಯ ವಿಸ್ತಾರ, ವೈವಿಧ್ಯ ಮತ್ತು ಅರಿವಿನ ಆಗರವಾಗಿದ್ದ ಪು. ಶ್ರೀ. ಅವರು ಎಲ್ಲ ಅರ್ಥಗಳಲ್ಲಿ ‘ದೇಸಿ’ ಪರಂಪರೆಯ ಘನ ಪಂಡಿತರು. ಇತಿಹಾಸ, ತುಳುಸಂಸ್ಕೃತಿ. ಯಕ್ಷಗಾನ, ಹಳಗನ್ನಡ, ಜಾನಪದ ವಸ್ತು-ಸಂಗತಿ, ನಂಬಿಕೆ-ನಡವಳಿಕೆ, ವ್ಯಕ್ತಿ-ವಿಷಯ- ಇಂಥ ವಿಷಯಗಳಲ್ಲಿ ತಲಸ್ಪರ್ಶಿ ಅನುಭವವಿದ್ದ ಅವರ ವಿಶ್ಲೇಷಣೆ, ನಿರೂಪಣ ಶೈಲಿ ಅನ್ಯತ್ರ ದುರ್ಲಭ ಎಂಬಷ್ಟು ಅನನ್ಯ.
ಅವರ ಬರಹಗಳ ಶಿರೋನಾಮೆಗಳ ಅವುಗಳ ವೈಶಿಷ್ಟ್ಯವನ್ನು ಹೇಳುತ್ತವೆ- ತೊಟ್ಟಿಲುಗಳು, ಮುಳ್ಳುಗಳು, ಕೋಣೆಗಳು, ಬಾವಿಗಳು, ಗುಡ್ಡಗಳು, ಕೊಡೆಗಳು, ತಿಂಡಿಗಳು, ಪ್ರಸಾದ ವೈವಿಧ್ಯ, ಹೂಮಾಲೆ, ತೋಡು-ಗುಂರ್ಪೆ-ಮದಕ, ದಾರಿಗಳು, ಯಕ್ಷಗಾನ ಪ್ರಸಂಗಗಳು, ಪ್ರಸಂಗ ಸಾಹಿತ್ಯ ಸಮೀಕ್ಷೆ, ಸತ್ಯಪರೀಕ್ಷೆಯ ವಿಧಾನಗಳು, ನಿಷೇಧ ಮತ್ತು ಪರಿಹಾರ, ಬೇಸಾಯದ ನುಡಿತಗಳು, ಕ್ಷೇತ್ರ ವೃತ್ತಾಂತಗಳು, ಜಾತ್ರೆಗಳು, ಆಳುಪ ವಂಶ, ದಕ್ಷಿಣಕನ್ನಡದಲ್ಲಿ ವೀರ ಶೈವ ಧರ್ಮ, ಶಿಲಾಶಾಸನ ವಿವರ- ಇತ್ಯಾದಿ.ಪಾರಂಪರಿಕ ನೋಟ ಮತ್ತು ಆಧುನಿಕ ಸಂಶೋಧಕನ ದೃಷ್ಟಿಗಳ ಸಮನ್ವಯ, ತುಂಬ ಸರಳ-ಸುಲಭ ರೀತಿಯ ನಿರೂಪಣೆ, ತಪಸ್ಸಿನಂಥ ದೀರ್ಘಕಾಲದ ಅಧ್ಯಯನ, ಸೂಕ್ಷ್ಮ ಪರಿಶೀಲನ, ನೈಜ ಸಂಸ್ಕೃತಿ ಪ್ರೇಮದ ಒಳನೋಟಗಳು- ಇವೆಲ್ಲವನ್ನು ಗಮನಿಸಿದರೆ ಇವು ಕನ್ನಡ ಸಾರಸತ್ವ ಲೋಕಕ್ಕೆ ವಿಶೇಷವಾದ ಕೊಡುಗೆಯೆ ಸರಿ.ಪದಪದವಿಗಳ ಯೋಚನೆ ಇಲ್ಲದೆ, ಸ್ವಂತ ಆಸಕ್ತಿಯಿಂದ ಗ್ರಂಥ ಸಂಗ್ರಹ ಮಾಡಿ, ಕೇತ್ರಕಾರ್ಯದಲ್ಲಿಯೂ ತೊಡಗಿಕೊಂಡು ಸುಮಾರು ಆರು ದಶಕಗಳ ಕಾಲ ‘ಬರಿಗಾಲ ಸಂಶೋಧಕ’ನಾಗಿ [ಬ್ಯಾರ್ಫೂಟ್ ರಿಸರ್ಚರ್] ಕ್ರಿಯಾಶೀಲರಾಗಿದ್ದವರು. ಅಧ್ಯಾಪಕ ವೃತ್ತಿಯಿಂದ ಬಂದ ವೇತನದ ದೊಡ್ಡ ಭಾಗವನ್ನು ಅಧ್ಯಯನ ಸಂಪನ್ಮೂಲಗಳ ಸಂಗ್ರಹಕ್ಕೆ ವ್ಯಯಿಸಿದವರು. ಒಬ್ಬ ಶಾಲಾಮಾಸ್ತರನಾಗಿ ಸಂಶೋಧನೆಯ ದೃಷ್ಟಿಯಲ್ಲಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ಮಟ್ಟದÀ ಸಾಧನೆ ಮಾಡಿದವರು. ಅನೇಕ ಸಂಶೋಧಕರಿಗೆ ಜಿಜ್ಞಾಸುಗಳಿಗೆ ಮಾರ್ಗದರ್ಶನ ಗ್ರಂಥ ಸಹಾಯ ಮಾಡಿದರು ಅವರ ಅಪ್ರಕಟಿತ ಬರಹಗಳ ಸಂಪುಟವು ಅಧ್ಯಯನ ಆಸಕ್ತರಿಗೆ ಒಂದು ಅಮುಲ್ಯ ಆಕಾರ ಗ್ರಂಥವೆನಿಸಲಿದೆ. -
Christa Shaka 1800 Ra Modalina Mysooru ithihaasa
₹295.00Author: D S Achuta Rao Translator: S Narendra Prasad
೧೮೦೦ ಕ್ರಿ. ಶ. ದ ಹಿಂದಿನ ಮೈಸೂರು ಇತಿಹಾಸವು ಪ್ರೊ. ಡಿ ಎಸ್ ಅಚ್ಯುತ ರಾವ್ ಅವರ ಜೀವನ ಮತ್ತು ಕೆಲಸದ ಬಗ್ಗೆ. ಮೈಸೂರು ಇತಿಹಾಸದ ಕುರಿತಾದ ಅವರ ಸಂಶೋಧನೆಯು 1940-65ರ ಅವಧಿಯಲ್ಲಿ ಅವರು ಪ್ರಕಟಿಸಿದ ಹತ್ತು ಸೂಚ್ಯಂಕ ಲೇಖನಗಳಿಂದ ಪ್ರತಿನಿಧಿಸುತ್ತದೆ. ಅವರು ಭಾರತದ ಇತಿಹಾಸ ಮತ್ತು ಅದರ ಅದ್ಭುತ ಭೂತಕಾಲವನ್ನು ಸಕ್ರಿಯವಾಗಿ ಜನಪ್ರಿಯಗೊಳಿಸಿದರು. ಮಹಾರಾಜಾಸ್ ಕಾಲೇಜ್ ಹಿಸ್ಟರಿ ಸೊಸೈಟಿ, ಭಾರತದ ವಸಾಹತು ಸಂಶೋಧಕರು ಮತ್ತು ಕನ್ನಡ ವಿಶ್ವಕೋಶದಲ್ಲಿ ಮೈಸೂರು ಸರ್ಕಾರದ ಉಪಕ್ರಮದಿಂದ ಭಾರತೀಯ ಇತಿಹಾಸದಲ್ಲಿ ಉಪಕ್ರಮಗಳನ್ನು ಪ್ರಸ್ತುತಪಡಿಸುವುದರಿಂದ ಅಂತಹ ಮೂರು ಲೇಖನಗಳನ್ನು ಸೇರಿಸಲಾಗಿದೆ. ಎರಡನೇ ಭಾಗದಲ್ಲಿ ಅವರ ಜೀವನಚರಿತ್ರೆಯಲ್ಲಿ, ಅವರ ವಿದ್ಯಾರ್ಥಿಗಳು ಮತ್ತು ಮಕ್ಕಳು ಶಿಕ್ಷಕ ಮತ್ತು ತಂದೆಯಾಗಿ ಅವರ ಜೀವನದ ಬಗ್ಗೆ ಬರೆದಿದ್ದಾರೆ, ಅವರ ಅವಧಿಯ ಸಂದರ್ಭವನ್ನು ಒದಗಿಸಿದ್ದಾರೆ. ಪುಸ್ತಕವು ಕಳೆದ ಶತಮಾನದ ಮಧ್ಯದಲ್ಲಿ ಇತಿಹಾಸ ಸಂಶೋಧನೆಗೆ ಆಸಕ್ತಿದಾಯಕ ವಿಂಡೋವನ್ನು ಪ್ರಸ್ತುತಪಡಿಸುತ್ತದೆ.
Interested readers may write to us at mup@manipal.edu about purchasing the book.


